ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತುರ್ತು ಚಿಕಿತ್ಸಾ ಕೇಂದ್ರ ಆರಂಭ ಶ್ರೀರಾಂಪುರ ಕಾಲೋನಿಯಲ್ಲಿ ವಾಂತಿಭೇದಿ ಪ್ರಕರಣಗಳು ಕಂಡುಬಂದ ಹಿನ್ನೆಲೆ:ಜಾಗೃತಿ

0
104

ಬಳ್ಳಾರಿ, ಜ.23 :ನಗರದ ಶ್ರೀರಾಂಪುರ ಕಾಲೋನಿಯಲ್ಲಿ ಕಂಡುಬಂದಿರುವ ವಾಂತಿಭೇದಿ ಪ್ರಕರಣಗಳ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಐಸಿಸಿ ವಿಭಾಗ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಶನಿವಾರ ಜಾಗೃತಿ ಮೂಡಿಸಲಾಯಿತು.
ಕುಡಿಯುವ ನೀರನ್ನು ಇಪ್ಪತ್ತು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ ಆರಿಸಿ ನಂತರ ಸೋಸಿ ಕುಡಿಯಲು ತಿಳಿಸಲಾಯಿತು.
ಬಿಸಿಯಾದ ಆಹಾರ ಪದಾರ್ಥವನ್ನು ಸೇವಿಸಲು ಮತ್ತು ಇಂದು ಮಾಡಿದ ಆಹಾರ ಪದಾರ್ಥವನ್ನು ಮರುದಿನ ಬಳಸದಂತೆ ಕೋರಲಾಯಿತು. ತಯಾರಿಸಿದ ಆಹಾರ ಪದಾರ್ಥಗಳನ್ನು ಮುಚ್ಚಳದಿಂದ ಮುಚ್ಚುವಂತೆ ಮತ್ತು ನೋಣಗಳು ಆಹಾರ ಪದಾರ್ಥಗಳ ಮೇಲೆ ಕುಳಿತುಕೊಳ್ಳುವಂತೆ ಜಾಗ್ರತೆ ವಹಿಸಲು ತಿಳಿಸಲಾಯಿತು.
ರಸ್ತೆ ಬದಿಯಲ್ಲಿ ತಯಾರಿಸುವ ಕರಿದ ಪದಾರ್ಥಗಳು ಹಾಗೂ ಇತರ ಯಾವುದೇ ಆಹಾರ ಪದಾರ್ಥಗಳನ್ನು ಸೇವಿಸದಂತೆ ಮತ್ತು ತಾತ್ಕಾಲಿಕವಾಗಿ ಅಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸಿದಂತೆ ಸೂಚಿಸಲಾಯಿತು. ಶೌಚದ ನಂತರ ಹಾಗೂ ಊಟದ ಮೊದಲು ಕೈಗಳನ್ನು ಸೋಪು ಮತ್ತು ನೀರಿನಿಂದ ಚೆನ್ನಾಗಿ ತೊಳೆಯಲು ವಿನಂತಿಸಲಾಯಿತು.
ಚರಂಡಿಗಳಲ್ಲಿ ನೀರಿನ ಸಂಪರ್ಕದ ಪೈಪ್‌ ಇರುವಲ್ಲಿಮತ್ತು ನಳಗಳಲ್ಲಿ ಚರಂಡಿ ನೀರು ಕಂಡುಬಂದಲ್ಲಿ ಮಹಾನಗರಪಾಲಿಕೆಯ ಗಮನಕ್ಕೆ ತಂದು ಸರಿಪಡಿಸಿಕೊಳ್ಳಲು ತಿಳಿಸಲಾಯಿತು. ತಾತ್ಕಾಲಿಕವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಿಸಿರುವ ತುರ್ತು ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಲು ಸಾರ್ವಜನಿಕರಿಗೆ ಕೋರಲಾಯಿತು. ಬಂಡಿಗಳಲ್ಲಿ ಕೋಯ್ದು ಮಾರಾಟ ಮಾಡುವ ಯಾವುದೆ ಹಣ್ಣುಗಳನ್ನು ತಿನ್ನದಂತೆ ವಿನಂತಿಸಲಾಯಿತು. ಮನೆಗಳ ಸುತ್ತಲೂ ಸ್ವಚ್ಛತೆ ಕಾಪಾಡಿ ನೋಣಗಳು ಬರದಂತೆ ಕ್ರಮವಹಿಸಲು ಕೋರಲಾಯಿತು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ. ಮೋಹನಕುಮಾರಿ, ಮಿಲ್ಲರಪೇಟೆ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಸೌಜನ್ಯ, ಡಾ.ಪಾವನಿ, ಜಿಲ್ಲಾ ಆರೋಗ್ಯ ಉಪಶಿಕ್ಷಣಾಧಿಕಾರಿ ಗೌರಮ್ಮ ,ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಮ್ಮ ಅಭಿಷೇಕ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

LEAVE A REPLY

Please enter your comment!
Please enter your name here