ತಾಲೂಕು ಕಚೇರಿಯಲ್ಲಿ ಮಂಗಳಮುಖಿಯರಿಗೆ ಮಾಶಾಸನ ವೇತನ ಆದೇಶ ಪತ್ರ ವಿತರಣೆ

0
102

ಬಳ್ಳಾರಿ:ನ:08:- ಕಳೆದ ಅಕ್ಟೋಬರ್ ತಿಂಗಳ 17 ರಂದು ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಟಿರವರು ಸಿಡಿಗಿನಮೊಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮದಲ್ಲಿ ಮಂಗಳಮುಖಿಯರು ಮಾಶಾಸನ ವೇತನ ಬರುತ್ತಿಲ್ಲ ಎಂದು ಮಾಡಿದ ಮನವಿ ಮೇರೆಗೆ ತಕ್ಷಣವೆ ಜಿಲ್ಲಾದಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಮುಂದಿನ ತಿಂಗಳಿಂದ ಇವರ ಕೆಲಸ ಕಾರ್ಯರೂಪವನ್ನಾಗಿ ಮಾಡಲು ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಶಾಸಕರಾದ ಬಿ. ನಾಗೇಂದ್ರ ಅವರು ಅಧಿಕಾರಿಗಳಿಗೆ ಆದೇಶ ನೀಡಿದ್ದರು.

ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಶಾಸಕರ ಆದೇಶದ ಮೇರೆಗೆ ಮಾನ್ಯ ತಹಶೀಲ್ದಾರ್ ಶ್ರೀ ರೆಹನ್ ಪಾಷ ಮತ್ತು ಸಿಡಿಗಿನಮೊಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಜಮ್ಮ ಬಾಲಾಂಜನೇಯರವರು ಇಂದು ಆದೇಶ ಪತ್ರಗಳನ್ನು ಮಂಗಳಮುಖಿಯರಿಗೆ ಹಸ್ತಾಂತರಿಸಿದರು

ಈ ಸಂದರ್ಭದಲ್ಲಿ ಗ್ರಾಮಾಂತರ ಶಾಸಕರಾದ ಶ್ರೀ ಬಿ.ನಾಗೇಂದ್ರರವರ ಆಪ್ತ ಸಹಾಯಕರಾದ ದುರ್ಗಾ ಪ್ರಸಾದ್ ಕಿಸಾನ್ ಕಾಂಗ್ರೆಸ್ ಕಾರ್ಯದರ್ಶಿಗಳಾದ ಯೋಗೇಶ್ ಕುಮಾರ್ ಭಂಡಾರಿ ರೇವಿನೋ ಇನ್ಸ್ಪೆಕ್ಟರ್ ಗಳಾದ ಅನ್ನಪೂರ್ಣ ಗ್ರಾಮ ಲೆಕ್ಕಾಧಿಕಾರಿಗಳಾದ ಶಿವಪ್ಪ ಸಿಡಿಗಿನಮೊಳ ಗ್ರಾಮ ಪಂಚಾಯಿತಿ ಸದಸ್ಯರಾದ ಸೀನಪ್ಪ ಟಿ, ಸಿಡಿಗಿನಮೊಳ ಪಂಚಾಯಿತಿ ಮಾಜಿ ಸದಸ್ಯರಾದ ಏ ಕೆ ಓಂಕಾರಪ್ಪ, ಮತ್ತು ಡಿ ರಾಮಯ್ಯಉಪಸ್ಥಿತರಿದ್ದರು

ವರದಿ:-ಮಹೇಶ್

LEAVE A REPLY

Please enter your comment!
Please enter your name here