ಸಂಡೂರು/ಬಂಡ್ರಿ.ಬಂಡ್ರಿ ಗ್ರಾಮ ಪಂಚಾಯಿತಿಯಲ್ಲಿ ದಿನಾಂಕ 25.01.2021 ರಂದು ಸೋಮವಾರ ಬಂಡ್ರಿ ಗ್ರಾಮದ ಉಡುಸಲಮ್ಮ ದೇವಸ್ಥಾನದ ಸಭಾಂಗಣದಲ್ಲಿ ಸಾಮಾಜಿಕ ಲೆಕ್ಕ ಪರಿಶೋದನೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ತಾಲೂಕು ಸಂಯೋಜನಾಧಿಕಾರಿ ಶಂಕರ್ ರೆಡ್ಡಿ ಮಾತನಾಡಿ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಕೊಳ್ಳಬೇಕೆಂದು ಸಾರ್ವಜನಿಕರಿಗೆ ಮಾಹಿತಿ ನೀಡಿದರು.ಕಳೆದ ವರ್ಷದಲ್ಲಿ ನರೇಗಾ ದಡಿಯಲ್ಲಿ ಬಳಕೆಯಾದ ಮೊತ್ತದ ಅಂಕಿ ಅಂಶಗಳನ್ನು ಸಾರ್ವಜನಿಕರಿಗೆ ತಿಳಿಸಿದರು.
ಸಭೆಯಲ್ಲಿ ಪಿಡಿಒ ದುರುಗಪ್ಪ ಮತ್ತು ದೊಡ್ಡಪ್ಪ ಗ್ರಾಮ ಸಂಪನ್ಮೂಲ ವ್ಯಕ್ತಿ ಹಾಗೂ ಅನುಷಾ ಗ್ರಾಮ ಸಂಪನ್ಮೂಲ ವ್ಯಕ್ತಿ, ಬಿಲ್ ಕಲೆಕ್ಟೇರ್ ವೀರಭದ್ರಪ್ಪ, ಕಂಪ್ಯೂಟರ್ ಆಪರೇಟರ್ ಸಂತೋಷ್ ಬಡಿಗೇರ್ ಮತ್ತು ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ. ನಾಗರಾಜ್. ಹಾಲಿ ಸದಸ್ಯರಾದ ನಲ್ಲಜರುವಪ್ಪ, ಪಕ್ಕಿರಪ್ಪ, ಜೆ. ವೆಂಕಟೇಶ್. ಶಿವಣ್ಣ ಬಿ. ಕರಿಲಿಂಗಪ್ಪ. ಕೋಡಿಹಳ್ಳಿ ವೆಂಕಟೇಶ್,ಹನುಮಯ್ಯ,ಮಾರಪ್ಪ,ಯನ್ನಜಪ್ಪ, ಸಣ್ಣಕಿ ಬಸವರಾಜ, ಕೊಟ್ರೇಶ್ ಮತ್ತಿತರು ಉಪಸ್ಥಿತರಿದ್ದರು.