ಧಾರವಾಡದ ಶ್ರೀ ಮಂತ್ರಾಲಯ ಪಾದಾಯಾತ್ರೆ ಸಂಘದ ಸದಸ್ಯರು ಧಾರವಾಡದಿಂದ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಪಾದಾಯಾತ್ರೆ ತೆರಳುವ ಮಧ್ಯದಲ್ಲಿ ಸಿಂಧನೂರು ತಾಲೂಕಿನ ಮೂರಮೈಲ್ ಕ್ಯಾಂಪ್ ನಲ್ಲಿನ ಕರಿಬಸವನಗರದ ಶ್ರೀ ರಂಭಾಪುರೀ ಶಾಖಾ ಮಠದಲ್ಲಿ ಪಾದಾಯಾತ್ರಾರ್ಥಿಗಳನ್ನು ಶ್ರೀ ಸೋಮನಾಥ ಶಿವಾಚಾರ್ಯರು ಬೆಳಿಗ್ಗೆ ಆತ್ಮೀಯವಾಗಿ ಸ್ವಾಗತಿಸಿ, ವಸತಿ ವ್ಯವಸ್ಥೆ ಮಾಡಿ ಮಧ್ಯಾಹ್ನದ ತೀರ್ಥಪ್ರಸಾದಕ್ಕಾಗಿ ಅವಕಾಶ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಪಾದಾಯಾತ್ರ ಮಂಡಳಿ ಸದಸ್ಯರಾದ ಉದ್ಬವ್ ಗಡದ್ ಕರ್ , ಆರ್ ಪಿ ಪಾಟೀಲ್,ರಂಗಣ್ಣ ಕುಲಕರ್ಣಿ,ಡಾ.ಮಹೇಂದ್ರಕರ್,ಡಾ.ಶ್ರೀವತ್ಸ, ಸಿಂಧನೂರಿನ ಡಾ.ವಿಜಯಕುಮಾರ ಜೋಶಿ , ಹನುಮೇಶ ಜಾಗೀರದಾರ ಸೇರಿದಂತೆ ಹಲವರಿದ್ದರು.
ವರದಿ:ಅವಿನಾಶ ದೇಶಪಾಂಡೆ