ಸಂತ ಕವಿ ಸರ್ವಜ್ಞ ಅವರ ಜಯಂತಿ ಆಚರಣೆ

0
120

ಬಳ್ಳಾರಿ/ಹೊಸಪೇಟೆ,ಫೆ.20: ಹೊಸಪೇಟೆ ತಾಲ್ಲೂಕು ಕಚೇರಿಯ ವತಿಯಿಂದ ಸಂತ ಕವಿ ಸರ್ವಜ್ಞ ಅವರ ಜಯಂತಿಯನ್ನು ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಶನಿವಾರ ಸರಳವಾಗಿ ಆಚರಿಸಲಾಯಿತು.
ತಾಲ್ಲೂಕು ಕಚೇರಿಯ ಉಪತಹಶೀಲ್ದಾರರಾದ (ಗ್ರೇಡ್-2) ಮೇಘನಾ ಅವರು ಸಂತ ಕವಿ ಸರ್ವಜ್ಞ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಮಾಜದ ಮುಖಂಡರಿಗೆ ಜಯಂತಿಯ ಶುಭಾಶಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಶಿರಸ್ತೇದಾರರಾದ ಶ್ರೀಧರ್, ರಮೇಶ, ಆಹಾರ ಇಲಾಖೆಯ ಪ್ರ.ದ.ಸ ಮಂಜುನಾಥ್, ತಾಲ್ಲೂಕು ಕಚೇರಿಯ ಪ್ರ.ದ.ಸ ಪಾಪಣ್ಣ, ನಗರಸಭೆ ಸಮುದಾಯದ ಸಂಘಟನಾಧಿಕಾರಿ ಎ.ರವಿಕುಮಾರ್ ಹಾಗೂ ತಾಲೂಕು ಕಚೇರಿಯ ಸಿಬ್ಬಂದಿಗಳು ಮತ್ತು ಕುಂಬಾರ ಸಮಾಜದ ಹುಲುಗಪ್ಪ, ರಾಮಾಂಜಿನಿ, ಹನುಂತರಾಯ, ಸುಡುಗಾಡಪ್ಪ, ನಾಗಪ್ಪ, ಅಂಕಲೇಶ ಹಾಗೂ ಇನ್ನಿತರರು ಭಾಗವಹಿಸದ್ದರು.

LEAVE A REPLY

Please enter your comment!
Please enter your name here