ಬಳ್ಳಾರಿ,ಮಾ.01: ನಗರದ ಸಂಜಯ್ಗಾಂಧಿ ನಗರದ ಉದ್ಯಾನವನದಲ್ಲಿ ಬುಡಾ ಅನುದಾನದಲ್ಲಿ ನಿರ್ಮಿಸಲಾಗಿರುವ ಎಲ್ಇಡಿ ವಿದ್ಯುತ್ ದೀಪಗಳು ಹಾಗೂ ಬೋರ್ವೆಲ್ ಸೇರಿದಂತೆ 6ಲಕ್ಷ ರೂ.ವೆಚ್ಚದ ಕಾಮಗಾರಿಗಳಿಗೆ ಬಳ್ಳಾರಿ ನಗರ ಶಾಸಕ ಸೋಮಶೇಖರರೆಡ್ಡಿ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ರಾಬಕೊ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ವೀರಶೇಖರರೆಡ್ಡಿ, ಮುಖಂಡರಾದ ಶ್ರೀನಿವಾಸ್ ಮೋತ್ಕರ್, ಶ್ರವಣ್ ಕುಮಾರ್ ಮತ್ತು ಪ್ರಾಧಿಕಾರದ ಆಯುಕ್ತ ವೀರೇಂದ್ರ ಕುಂದಗೋಳ, ಎಂಜನಿಯರ್ಗಳಾದ ರವಿಶಂಕರ್, ಪವನ್ ದೇಸಾಯಿ ಮತ್ತು ಸಂಜಯ್ ಗಾಂಧಿ ನಗರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿ ಪ್ರಾಣಲಿಂಗಪ್ಪ, ವಿಜಯಕುಮಾರ್, ವೀರಣ್ಣಗೌಡ, ಚಂದ್ರಶೇಖರರೆಡ್ಡಿ, ಪ್ರತಾಪ್ ರೆಡ್ಡಿ ಮತ್ತಿತರರು ಇದ್ದರು.