ಇತಿಹಾಸವನ್ನರಿಯದೇ ಭವಿಷ್ಯವನ್ನು ನಿರ್ಮಿಸಲು ಸಾಧ್ಯವಿಲ್ಲ ಲಕ್ಷಾಂತರ ನಾಯಕರ ಹೋರಾಟದ ಫಲವಾಗಿ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯ ದೊರಕಿದೆ

0
143


ಗದಗ . ಲಕ್ಷಾಂತರ ನಾಯಕರ ಹೋರಾಟದ ಫಲವಾಗಿ ಹಾಗೂ ತ್ಯಾಗ ಬಲಿದಾನಗಳಿಂದ 1947ರ ಅಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರದೊರಕಿತು. ಸ್ವಾತಂತ್ರಯ ಗಳಿಸಿ 75 ವರ್ಷದ ಅಂಚಿನಲ್ಲಿರುವ ಇಂದು ನಾವು ಅಮೃತ ಮಹೋತ್ಸವವನ್ನು ಆಚರಿಸುತ್ತಿರುವುದು ಸ್ಮರಣೀಯವಾಗಿದೆ. ಸ್ವಾತಂತ್ರ÷್ಯ ಬಂದಾಗ ಭಾರತ ಬಡರಾಷ್ಟçವಾಗಿತ್ತು. 75 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿ ಈಗ ಜಗತ್ತಿನ ಮುಂಚೂಣಿ ರಾಷ್ಟçವಾಗಿ ಭಾರತ ಹೊರಹೊಮ್ಮಿದೆ ಎಂದು ಸಣ್ಣ ಕೈಗಾರಿಕಾ ಮತ್ತು ವಾರ್ತಾ ಇಲಾಖೆ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
ನರಗುಂದ ಪುರಸಭೆ ಆವರಣದಲ್ಲಿ ಜಿಲ್ಲಾಡಳಿತದಿಂದ ಏರ್ಪಡಿಸಲಾದ ಸ್ವಾತಂತ್ರö್ಯದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.
ಸ್ವಾತಂತ್ರö್ಯ ಹೋರಾಟದ ಆ ದಿನಗಳನ್ನು ನಾವು ನೋಡಿಲ್ಲ, ಆದರೆ ಹೋರಾಟದ ಆ ದಿನಗಳನ್ನು ನಾವಿಂದು ಅರಿಯೋಣ. ಅರಿಯುವ ಮೂಲಕ ಅವರ ಆದರ್ಶದಂತೆ ಬದುಕೋಣ ಎಂದರು. ನಾವು ಇತಿಹಾಸವನ್ನು ಅರಿಯಬೇಕಾದ ಮತ್ತು ಇತಿಹಾಸದ ಮೌಲ್ಯಗಳನ್ನು ನೆನೆಯಬೇಕಾದ ಅಗತ್ಯವಿದೆ. ಇತಿಹಾಸವನ್ನರಿಯದೇ ಭವಿಷ್ಯವನ್ನು ನಿರ್ಮಿಸಲು ಸಾಧ್ಯವಿಲ್ಲ. ನಮ್ಮ ಭವ್ಯ ಭಾರತದ, ಭವ್ಯ ಕರ್ನಾಟಕದ ಸ್ವಾತಂತ್ರ÷್ಯ ಹೋರಾಟದ ಇತಿಹಾಸವನ್ನು ಸ್ಮರಿಸುವ ಸುದಿನವಿಂದು ನಮಗೆ ಲಭಿಸಿದೆ. ಪ್ರಧಾನಿಗಳ ಆಶಯದಂತೆ ಅಮೃತ ಮಹೋತ್ಸವ ಕಾರ್ಯಕ್ರಮ ನವ ಭಾರತದ ಕ್ರಾಂತಿಗೆ ಮುನ್ನಡೆಯಾಗಲಿ ಎಂದರು.
ಮಾರ್ಚ್ 12ರಂದು ಗುಜರಾತನ ಸಬರಮತಿ ಆಶ್ರಮದಲ್ಲಿ ಅಮೃತಮಹೋತ್ಸವ ಕಾರ್ಯಕ್ರಮ ಆರಂಭವಾಗಿದ್ದು, ದೇಶದ 75 ಕಡೆಗಳಲ್ಲಿ 75 ವಾರಗಳ ಕಾಲ ನಡೆಯಲಿದೆ. ಭಾರತ ಸ್ವಾತಂತ್ರ÷್ಯದ 75 ವರ್ಷಗಳ ಆಚರಣೆಯ ಆಜಾದಿ ಕಾ ಅಮೃತ ಮಹೋತ್ಸವಕ್ಕೆ ರಾಷ್ಟಿçÃಯ ಸಮಿತಿಯೊಂದನ್ನು ರಚಿಸಿದ್ದು, ಇದರ ಮೊದಲ ಸಭೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯಿತು. 75 ವರ್ಷಗಳ ಸಂಭ್ರಮಾಚರಣೆಯನ್ನು 130 ಕೋಟಿ ಭಾರತೀಯರ ಭಾಗವಹಿಸುವಿಕೆಯ ಮೂಲಕ ಮಾಡಬೇಕಾಗಿದೆ ಮತ್ತು ಜನರ ಈ ಭಾಗವಹಿಸುವಿಕೆಯು ಆಚರಣೆಯ ಕೇಂದ್ರ ಬಿಂದುವಾಗಿರುತ್ತದೆ. ಈ ಭಾಗವಹಿಸುವಿಕೆಯು 130 ಕೋಟಿ ದೇಶವಾಸಿಗಳ ಭಾವನೆಗಳು, ಸಲಹೆಗಳು ಮತ್ತು ಕನಸುಗಳನ್ನು ಒಳಗೊಂಡಿರುತ್ತದೆ ಎಂದು ಪ್ರಧಾನಿಗಳು ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ ಎಂದು ಸಚಿವರು ಹೇಳಿದರು.
ಇಂದು ನಾವು ಸ್ವತಂತ್ರದಿAದ ಬದುಕುತ್ತಿದ್ದೇವೆಂದರೆ ಅದು ನಮ್ಮ ಹಿರಿಯರ ಹೋರಾಟ, ತ್ಯಾಗ ಬಲಿದಾನದ ಫಲವಾಗಿದೆ. ಲಕ್ಷಾಂತರ ಜನರು ಇಂಗ್ಲಿಷರ ವಿರುದ್ಧದ ಹೋರಾಟದಲ್ಲಿ ಜೀವ ಕಳೆದುಕೊಂಡಿದ್ದಾರೆ. ಮಂದಗಾಮಿಗಳು, ತೀವ್ರಗಾಮಿಗಳು ಹಾಗೂ ಕ್ರಾಂತಿಕಾರಿಗಳು ಎಂದು ಈ ಹೋರಾಟಗಾರರನ್ನು ವಿಂಗಡಿಸಲಾಗಿದೆ .ಹೋರಾಟಗಾರರು ಸುಖಜೀವನನವನ್ನು ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿದ ದೇಶ ಭಕ್ತರು. ಇವರು ಇಂದಿನ ಯುವಕರಿಗೆ ಆದರ್ಶಪ್ರಾಯರಾಗಿದ್ದಾರೆ ಎಂದರು.
ಕರ್ನಾಟಕದಲ್ಲಿ ಸ್ವಾತಂತ್ರö್ಯ ಹೋರಾಟ: ಕರ್ನಾಟಕದ ಅನೇಕ ರಾಜರು, ಸ್ವಾತಂತ್ರ÷್ಯ ಹೋರಾಟಗಾರರು ಸ್ವಾತಂತ್ರ÷್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಬ್ರಿಟಿಷರ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯ ನೆಪದಿಂದ ಕಿತ್ತೂರನ್ನು ವಶಪಡಿಸಿಕೊಂಡಾಗ ಬ್ರಿಟಿಷರ ವಿರುದ್ಧ ಕಿತ್ತೂರು ರಾಣಿ ಚೆನ್ನಮ್ಮ ವೀರಾವೇಶದಿಂದ ಹೋರಾಟ ಮಾಡಿದ್ದಾಳೆ. ಚೆನ್ನಮ್ಮಳ ಬಂಟ ಸಂಗೊಳ್ಳಿ ರಾಯಣ್ಣ ಕೂಡಾ ಬ್ರಿಟಿಷರ ವಿರುದ್ಧ ಸೈನ್ಯ ಕಟ್ಟಿ ಹೋರಾಡಿ ದೇಶಕ್ಕಾಗಿ ತನ್ನ ಪ್ರಾಣವನ್ನೇ ಬಲಿದಾನ ಮಾಡಿದ್ದಾನೆ.
ಕರ್ನಾಟಕದಲ್ಲಿ ಬ್ರಿಟಿಷರ ವಿರುದ್ಧ ಶಸಸ್ತç ಹೋರಾಟ ಮಾಡಿದವರಲ್ಲಿ ಹೈದರಾಲಿ, ಅವನ ಮಗ ಟಿಪುö್ಪ ಸುಲ್ತಾನ್, ಸುರಪುರದ ವೆಂಕಟಪ್ಪ ನಾಯಕ, ಹಲಗಲಿ ಬೇಡರು ಮುಂತಾದವರನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಬೇಕು. ಸ್ವಾತಂತ್ರ÷್ಯ ಹೋರಾಟದಲ್ಲಿ ನಮ್ಮ ಗದಗ ಜಿಲ್ಲೆಯ ಕೊಡುಗೆಯೂ ಬಹಳಷ್ಟಿದೆ. ಮುಂಡರಗಿ ಭೀಮರಾಯ, ನರಗುಂದದ ಬಾಬಾಸಾಹೇಬ, ರೋಣ ತಾಲೂಕು ಜಕ್ಕಲಿ ಗ್ರಾಮದ ಅಂದಾನಪ್ಪ ಮೇಟಿ ಮುಂತಾದವರನ್ನು ನೆನಯದೇ ಹೋದರೆ ತಪ್ಪಾಗುವುದು ಎಂದು ಅಭಿಪ್ರಾಯ ಪಟ್ಟರು.
ರೋಣ ತಾಲೂಕಿನ ಜಕ್ಕಲಿ ಗ್ರಾಮದ ಅಂದಾನಪ್ಪ ದೊಡ್ಡಮೇಟಿ. ಇವರು ಗಾಂಧೀಜಿಯವರ ಅನುಯಾಯಿಗಳಾಗಿದ್ದರು. ಗಾಂಧೀಜಿಯವರು ಜಕ್ಕಲಿ ಗ್ರಾಮದಲ್ಲಿ ಒಂದು ದಿನ ತಂಗಿದ್ದರು. ಬಾಬಾ ಸಾಹೇಬ ಎಂದೇ ಪ್ರಖ್ಯಾತರಾದ ನರಗುಂದದ ಭಾಸ್ಕರ್ ರಾವ್ ದತ್ತುಮಕ್ಕಳಿಗೆ ಹಕ್ಕಿಲ್ಲ ನೀತಿ ವಿರುದ್ಧ ಪ್ರತಿಭಟಿಸಿ ರಾತ್ರೋ ರಾತ್ರಿ ಆಂಗ್ಲರ ಮೇಲೆ ದಾಳಿ ಮಾಡಿ ಬ್ರಿಟಿಷ್ ಅಧಿಕಾರಿ ಮ್ಯಾನ್ ಸನ್ ರುಂಡವನ್ನು ಚೆಂಡಾಡಿ ಅಗಸಿ ಬಾಗಿಲಿಗೆ ತಂದು ಕಟ್ಟುತ್ತಾರೆ. ಅಂದಿನಿAದ ನರಗುಂದದ ಅಗಸಿ ಕೆಂಪಗಸಿ ಎಂದು ಪ್ರಖ್ಯಾತವಾಯಿತು ಎಂದು ಸಚಿವರು ಇತಿಹಾಸವನ್ನು ನೆನೆದರು.
ಉಪನ್ಯಾಸಕ ಎಂ.ಎಸ್. ಯಾವಗಲ್ ಮಾತನಾಡಿ ಹೋರಾಟಗಾರ ಭಾಸ್ಕರ್ ರಾವ್ ಅವರ ಹೋರಾಟ ಹಾಗೂ ನರಗುಂದ ರೈತ ಬಂಡಾಯ ಹಾಗೂ ಸ್ವಾತಂತ್ರö್ಯ ಹೋರಾಟದ ಬಂಡಾಯವನ್ನು ಕಟ್ಟು ಕಣ್ಣು ಕಟ್ಟುವಂತೆ ವಿವರಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ 7.30 ರಿಂದ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡು ಯಶಸ್ವಿಗೊಳಿಸಲಾಯಿತು. ನಂತರ ಕೆಂಪಗಸಿ ದ್ವಾರದಿಂದ ಪುರಸಭೆ ಆವರಣದವರೆಗೆ ಸೈಕಲ್ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಲುಪಿತು.
ಕಾರ್ಯಕ್ರಮದಲ್ಲಿ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಂದ ಸ್ವಾತಂತ್ರö್ಯ ಹೋರಾಟಗಾರ ಭಾಸ್ಕರ್ ರಾವ ಅವರ ಕಿರುನಾಟಕ ಪ್ರದರ್ಶನವು ನೆರೆದ ಸಾರ್ವಜನಿಕರ , ಜನಪ್ರತಿನಿಧಿಗಳ, ಹಾಗೂ ಅಧಿಕಾರಿಗಳ ಪ್ರಶಂಸೆಗೆ ಪಾತ್ರವಾಯಿತು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿನಿಯರಿಗೆ ಸಚಿವರು ಸಾಂಕೇತಿಕವಾಗಿ ಲ್ಯಾಪ್‌ಟಾಪ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಭಾವನಾ ಪಾಟೀಲ, ಉಪಾಧ್ಯಕ್ಷ ಪ್ರಶಾಂತ ಜೋಶಿ, ಜಿಲ್ಲಾ ಪಂಚಾಯತ್ ಸದಸ್ಯೆ ರೇಣುಕಾ ಅವರಾದಿ , ಎಪಿಎಂಸಿ ಅಧ್ಯಕ್ಷ ಯಲ್ಲಪ್ಪ ಗೌಡರ, ಪ್ರಮುಖರಾದ ಅಜ್ಜಪ್ಪ ಹುಡೇದ , ತಿಮ್ಮನಗೌಡರ, ಜಿ.ಬಿ. ಕುಲಕರ್ಣಿ, ಗೂರಪ್ಪ ಆದಪ್ಪನವರ, ಪ್ರಕಾಶಗೌಡ ತಿರಕನಗೌಡ , ಜಿಲ್ಲಾಧಿಕಾರಿ ಎಂ.ಸುAದರೇಶ್ ಬಾಬು, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಯತೀಶ್ ಎನ್, ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here