ಬಳ್ಳಾರಿ ಮೇ06: 3ನೇ ವಾರ್ಡ್ ನಿಂದ ಪಕ್ಷೇತರರಾಗಿ ಆಯ್ಕೆಯಾಗಿರುವ ಮಂಡ್ಲೂರು ಪ್ರಭಂಜನ್ ಕುಮಾರ್ ಅವರು ಇಂದು ಪಾಲಿಕೆಯ ಕಚೇರಿಗೆ ಭೇಟಿ ನೀಡಿ,ಆಯುಕ್ತರು,ಇಂಜಿನೀಯರ್ ಗಳು ಸೇರಿದಂತೆ ಪ್ರಮುಖ ಅಧಿಕಾರಿಗಳನ್ನು ಭೇಟಿ ಮಾಡಿ ವಾರ್ಡಿನಲ್ಲಿನ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಕೋವಿಡ್ ಕಾರಣಕ್ಕಾಗಿ ಮೇಯರ್ ಮತ್ತು ಉಪಮೇಯರ್ ಆಯ್ಕೆ ವಿಳಂಬವಾಗುವ ಸಾಧ್ಯತೆ ಇದೆ. ಅಲ್ಲಿನವರೆಗೆ ವಾರ್ಡಿನಲ್ಲಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದಾಗಿ ಪ್ರಭಂಜನ್ ಕುಮಾರ್ ತಿಳಿಸಿದ್ದಾರೆ…
ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 3ನೇ ವಾಡ್೯ನಿಂದ ಎಂ.ಪ್ರಭಂಜನ್ ಕುಮಾರ್ ಅವರು ಚುನಾಯಿತಗೊಂಡ ಹಿನ್ನೆಲೆ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರಿಗೆ ಅಭಿನಂದನ ಪೂರ್ವಕವಾಗಿ ಹೂವಿನ ಸಸಿಯನ್ನು ವಿತರಿಸಲಾಯಿತು. ಇದರೊಂದಿಗೆ ನಗರದಲ್ಲಿನ ಪ್ರಮುಖ ಮುಖಂಡರಿಗೆ, ಎಂಜಿನಿಯರ್ ಗಳಿಗೆ ಸಹ ಸಸಿಗಳನ್ನು ವಿತರಿಸುವ ಮೂಲಕ ಪರಿಸರ ಪ್ರೇಮವನ್ನು ಮೆರೆದರು.