ಪ್ರಕೃತಿ ವಿಕೋಪಕ್ಕೀಡಾದ ಕುಟುಂಬಗಳಿಗೆ ಶಾಸಕ ಎನ್ ವೈ ಗೋಪಾಲಕೃಷ್ಣ ರಿಂದ ಪರಿಹಾರ

0
122

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ವಿವಿದೆಡೆಗಳಲ್ಲಿ,ಇತ್ತೀಚೆಗೆ ಪ್ರಕೃತಿ ವಿಕೋಪಕ್ಕೀಡಾಗಿದ್ದ ಕುಟುಂಬಗಳಿಗೆ ಸರ್ಕಾರ ಪರಿಹಾರ ಒದಗಿಸಿದೆ.ಕ್ಷೇತ್ರದ ಶಾಸಕ ಎಮ್.ವೈ.ಗೋಪಾಲಕೃಷ್ಣ ರವರ ಸೂಚನೆ ಮೇರೆಗೆ,ತಾಲೂಕಾಡಳಿತ ಆಯೋಜಿಸಿದ್ದ ಕೋವಿಡ್19 ಮುಂಜಾಗ್ರತಾ ಕ್ರಮ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ. ಸಿಡಿಲು ಬಡಿದು ಮೃತಪಟ್ಟ 4ಜನರ ಕುಟುಂಬಗಳಿಗೆ ತಲಾ 5ಲಕ್ಷ₹ಪರಿಹಾರ ಹಣ ನೀಡಲಾಗಿದೆ,

ಸಿಡಿಲಿನಿಂದಾಗಿ 18ಮೇಕೆಗಳನ್ನ ಕಳೆದು ಕೊಂಡಿದ್ದವರಿಗೆ ಒಟ್ಟು 54ಸಾವಿರ₹.ಸಿಡಿಲಿನಿಂದಾಗಿ 1ಆಕಳು ಕಳೆದು ಕೊಂಡವರಿಗೆ 30ಸಾವಿರ₹ ಹಣ ಮಂಜೂರಾಗಿದ್ದು. ಪರಿಹಾರ ಪಲಾನುಭವಿಗಳ ಖಾತೆಗೆ ಜಮಾ ಆಗಿದೆ ಅದರ ಆರ್ಟಿಜಿಏಸ್ ಪ್ರಮಾಣ ಪತ್ರವನ್ನು, ಶಾಸಕ ಎನ್.ವೈ.ಗೋಪಾಲಕೃಷ್ಣ ರವರು ವಿತರಿಸಿದರು.

ತಹಶಿಲ್ದಾರರಾದ ಎಸ್.ಮಹಾಬಲೇಶ್ವರ ಹಾಗೂ ಕೊಟ್ಟೂರು ತಹಶಿಲ್ದಾರರಾದ ಅನಿಲ್ ಕುಮಾರ ಸೇರಿದಂತೆ.ತಾಲೂಕು ಮಟ್ಟದ ವಿವಿದ ಇಲಾಖಾಧಿಕಾರಿಗಳು ಮತ್ತು ಜನಪ್ರತಿನಿಧಿಗಳಿದ್ದರು.

ವರದಿ:-ಮೀನಕೆರೆ ತಿಪ್ಪೇಸ್ವಾಮಿ
ಹಾಯ್ ಸಂಡೂರ್.ಪತ್ರಿಕೆ
ವರದಿಗಾರರು

LEAVE A REPLY

Please enter your comment!
Please enter your name here