ವಿಜಯನಗರ ಜಿಲ್ಲೆ ಗಡಿ ಗ್ರಾಮವಾದ ತಾಯಕನಹಳ್ಳಿಯಲ್ಲಿ ನಿನ್ನೆ ಸಂಜೆ ಟೀ ಮಾಡುತ್ತಿದ್ದ ವೇಳೆಯಲ್ಲಿ ಸಿಲಿಂಡರ್ ಸ್ಫೋಟವಾಗಿದೆ.
ಸ್ಫೋಟದ ಪರಿಣಾಮ ಇಬ್ಬರು ಸಜೀವ ದಹನವಾಗಿದ್ದಾರೆ.ಗ್ರಾಮದ ಚಿಚ್ಚಿ ಬಸಣ್ಣನ ದ್ವಿತೀಯ ಮಗನಾದ ಕೃಷ್ಣಮೂರ್ತಿ 32 ವರ್ಷ ಮತ್ತು ತಂಗಿಯ ಮಗಳು ಸೊಸೆ 11 ವರ್ಷದ ಭೂಮಿಕಾ ಸಜೀವವಾಗಿ ಸಾವಿಗೀಡಾಗಿರುವ ದುರ್ದೈವಿಗಳು .
ಟೀ ಅಂಗಡಿಯ ಜತೆ ಬೇಕರಿ ಐಟಂಗಳು ಕೂಡ ಮಾಡುತ್ತಿದ್ದರು ಎನ್ನುವ ಸುದ್ದಿ ತಿಳಿದು ಬಂದಿದೆ .
ಬೆಂಕಿ ನಂದಿಸಲು ಊರಿನ ಗ್ರಾಮಸ್ಥರು ಹರಸಾಹಸ ಪಟ್ಟರು ,ಕೊನೆಗೆ ಎಲ್ಲರೂ ಸೇರಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಆದರೆ ಅಷ್ಟೊತ್ತಿಗಾಗಲೇ ಇಬ್ಬರು ಸುಟ್ಟು ಕರಕಲಾಗಿದ್ದರು .
ಮೃತ ಕೃಷ್ಣಮೂರ್ತಿ ಆಧಾರಸ್ತಂಭವಾಗಿದ್ದ ಈ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ ಪರಿಣಾಮ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ ಸುದ್ದಿ ತಿಳಿದ ಅಣ್ಣಾ ಮಂಜುನಾಥ ತಾಯಿ ಸ್ಥಳದಲ್ಲಿಯೇ ಕುಸಿದು ಬಿದ್ದರು ಗ್ರಾಮದಲ್ಲಿ ಎಲ್ಲಾ ವರ್ಗದವರ ಜೊತೆ ಒಳ್ಳೆಯ ಒಡನಾಟ ಇಟ್ಟುಕೊಂದಿದ್ದ ಕೃಷ್ಣ ಅಗಾಗಿ ನೆರೆದ ಜನ ಸಮೂಹವೇ ಕಣ್ಣೀರಿಟ್ಟರು
ನಂದೀಶ್ ನಾಯಕ,
ರಾಜ್ಯ ಕ್ರೈಂ ವರದಿಗಾರ