ಬಿಬಿತಾಂಡ:ನೈರ್ಮಲ್ಯತೆ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಿ

0
72

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಶಿವಪುರ ಗ್ರಾಮಪಂಚಾಯ್ತಿ ವ್ಯಾಪ್ತಿ ಬಂಡೇ ಬಸಾಪುರ ತಾಂಡದಲ್ಲಿ,
ಬಹುದಿನಗಳಿಂದ ನೈರ್ಮಲ್ಯತೆ ಮರೀಚಿಕೆಯಾಗಿದ್ದು ಮೂಲ ಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಿಲ್ಲ ಎಂದು ಗ್ರ‍ಾಮಸ್ತರು ದೂರಿದ್ದಾರೆ.ಕುಡಿಯೋ ನೀರಿನ ಟ್ಯಾಂಕ್ ಗಳನ್ನು ವರ್ಷಗಳಿಂದಲೂ ಸ್ವಚ್ಚಮಾಡಿಲ್ಲ,ಕಾಲುವೆಗಳು ತುಂಬಿದ್ದು ದುರ್ನಾಥ ಬೀರುತ್ತಿವೆ, ಸೊಳ್ಳೆಗಳ ಹಾವಳಿ ಮಿತಿ ಮೀರಿದೆ ಮನೆಗಳ ಅಂಗಳದಲ್ಲಿಯೇ ತಿಪ್ಪೆಗಳಿದ್ದು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಸೃಷ್ಟಿಯಾಗಿದೆ.ಮೂಲಭೂತ ಸೌಕರ್ಯಗಳು ಗ್ರಾಮಕ್ಕೆ ವರ್ಷಗಳಿಂದಲೂ ಒದಗಿಸಿಲ್ಲ, ರಸ್ಥೆಗಳಲ್ಲಿ ಗುಂಡಿಗಳು ನಿರ್ಮಾಣಗೊಂಡಿವೆ ಹಾಗೂ ಸಮರ್ಪಕವಾಗಿ ಕುಡಿಯೋ ನೀರಿನ ವ್ಯವಸ್ಥೆ ಮಾಡಬೇಕಿದೆ,ಬೀದಿ ದೀಪಗಳನ್ನ ಅಗತ್ಯ ವಿರುವೆಡೆಗಳಲ್ಲಿ ಹಾಕಬೇಕಿದೆ,ಚರಂಡಿಗಳಲ್ಲಿ ತ್ಯಾಜ್ಯ ಕೊಳೆತು ನಾರುತ್ತಿದೆ.ಕಾರಣ ಶೀಘ್ರವೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಈ ಸಂಬಂಧಿಸಿದಂತೆ
ಬಿ.ಬಿ.ತ‍ಂಡಾದ ಯುವಕರು ಶಿವಪುರ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಮಾಡಿದ್ದಾರೆ.

✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

LEAVE A REPLY

Please enter your comment!
Please enter your name here