ವಿಜಯನಗರ:02:-ಕೂಡ್ಲಿಗಿ ಪಟ್ಟಣದಲ್ಲಿ ಇಂದು ರಂಜಾನ್ ಹಬ್ಬದ ಪ್ರಯುಕ್ತ ಪಟ್ಟಣ ಪಂಚಾಯತಿ ಸದಸ್ಯರಾದ ಸೈಯದ್ ಶುಕೂರ್ ಇವರ ವತಿಯಿಂದ ಸುಮಾರು 60 ಬಡ ಕುಟುಂಬಗಳಿಗೆ ಆಹಾರದ ಕೀಟಗಳನ್ನು ವಿತರಿಸಲಾಯಿತು. ಬಳಿಕ ಮಾತನಾಡಿದ ಅವರು ಪ್ರತಿ ವರ್ಷ ರಂಜಾನ್ ಹಬ್ಬಕ್ಕೆ ಇಲ್ಲಿನ ಜನರಿಗೆ ರಂಜಾನ್ ಕಿಟ್ ನೀಡುತ್ತಾ ಬಂದಿದ್ದು, ಈ ಬಾರಿಯೂ ಕೂಡ ಜನರು ಸಂತೋಷದಿಂದ ರಂಜಾನ್ ಹಬ್ಬವನ್ನು ಆಚರಿಸಲಿ ಎಂದು 60 ಜನರಿಗೆ, ಅದರಲ್ಲಿಯೂ ಅಂಗವಿಕಲರಿಗೆ, ಪೌರ ಕಾರ್ಮಿಕರಿಗೆ ಈ ಕಿಟ್ ಗಳನ್ನು ನೀಡಲಾಗಿದೆ ಎಂದರು.
ಅಲ್ಲಿನ ಮುಸ್ಲಿಂ ಬಾಂಧವರು ಮಾತನಾಡಿ ಪ್ರತಿ ವರ್ಷ ರಂಜಾನ್ ಕಿಟ್ ವಿತರಣೆ ಮಾಡುತ್ತಾ ಬರುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಅಲ್ಲಾ ಅವರಿಗೆ ಮತ್ತಷ್ಟು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸ್ನೇಹಿತರಾದ ಇಬಾದತ್ಉಲಾ, ಮುಜಮಿಲ್, ಯಾಕೂಬ್, ಜಬಿವುಲ್ಲಾ, ಜಿಲಾನ್, ಭಾಷಿದ್, ತೌಫಿಕ್, ಅಬ್ದುಲ್ ಶುಕೂರ್, ಶಬ್ಬೀರ್, ಹನ್ನಾನ, ಅಸ್ಲಾಂ, ವೆಂಕಟೇಶ್, ನೌಮನ, ಹೀಬಜೂ, ಇಸ್ಮಾಯಿಲ್, ಮೌಲಾ, ಅಹಮ್ಮದ್, ರಹಮತ್, ಅಬ್ದುಲ್, ಗಿರೀಶ್, ಕೃಷ್ಣ, ಅಬ್ರಾರ್, ಸುಮಾಮ ಹಾಗೂ ಅನೇಕ ಸ್ನೇಹಿತರು ಉಪಸ್ಥಿತರಿದ್ದರು.