ಸಂಡೂರು: ತಾಲೂಕಿನ ನಾಗೇನಹಳ್ಳಿ ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡ ಮಂಜುನಾಥ್ (62) ಅವರು ಕೋವಿಡ್ ಗೆ ಬಲಿಯಾಗಿದ್ದಾರೆ.
ವಾರದ ಕೆಳಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಬಳ್ಳಾರಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ದಿನಾಂಕ 28.05.2021 ರಂದು 12:46 ಸುಮಾರಿಗೆ ಮೃತರಾಗಿದ್ದಾರೆ. ದುರಂತವೆಂದರೆ ಎರಡು ದಿನಗಳ ಕೆಳಗೆ ಅವರ ಮಗಳು ಕೂಡ ಕೋವಿಡ್ ಸೋಂಕಿನಿಂದ ಮರಣ ಹೊಂದಿದ್ದರು.
ನಾಗೇನಹಳ್ಳಿ ಮಂಜುನಾಥ್ ಅವರು ಮಂಡಲ ಪಂಚಾಯತಿಯ ಸದಸ್ಯರಾಗಿ, ಜಿಎಲ್ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಹಾಗೂ ತಾಲೂಕ ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಶಾಸಕ ಈ ತುಕಾರಾಂ,ಹೆಚ್ ಕೆ ಹಳ್ಳಿ ಜಯರಾಮ್ , ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಸಾಲಿ ಸಿದ್ದಯ್ಯಸ್ವಾಮಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಾದ ಲಕ್ಷ್ಮಣ ಹಾಗೂ ಹನುಮಂತಪ್ಪ ಸೇರಿದಂತೆ ಅನೇಕ ಮುಖಂಡರುಗಳು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.