ಜಿಲ್ಲಾ ಪೊಲೀಸ್ ಇಲಾಖೆ ಇಆರ್‍ಎಸ್‍ಎಸ್-112 ಅಮ್ಮಿನಭಾವಿ ಗ್ರಾಮದಲ್ಲಿ ಮನೆಗೆ ಬೆಂಕಿ ಆರೋಪಿತರ ಮೇಲೆ ದೂರು ದಾಖಲು

0
122

ಧಾರವಾಡ : ಧಾರವಾಡ ಜಿಲ್ಲೆಯ ಅಮ್ಮಿನಭಾವಿ ಗ್ರಾಮದಲ್ಲಿ ಜೂನ್ 22 ರಂದು ಮುರುಗೇಶಗಾಡದ ಹಾಗೂ ಇನ್ನುಳಿದ ಆರೋಪಿತರು ಸೇರಿ ರಸೂಲಸಾಬ ಎಂಬುವವರ ಮನೆಗೆ ಬೆಂಕಿ ಹಚ್ಚಿದ್ದು, ಘಟನೆ ನಡೆದ ತಕ್ಷಣವೇ ಇಆರ್‍ಎಸ್‍ಎಸ್-112 ತಂಡದವರು ಯಾವುದೇ ಪ್ರಾಣಹಾನಿ ಆಗದಂತೆ ತಡೆದು ತತಕ್ಷಣವೇ ಬೆಂಕಿಯನ್ನು ನಿಂದಿಸಿ, ತಕ್ಷಣವೇ ಆರೋಪಿಗಳನ್ನು ಹಿಡಿದು ಗ್ರಾಮೀಣ ಪೊಲೀಸ್ ಠಾಣೆಗೆ ಒಪ್ಪಿಸಿ ದೂರು ದಾಖಲಿಸಲಾಗಿದೆ.

ಸದರಿ ಕಾರ್ಯವನ್ನು ಪೊಲೀಸ್‍ಅಧೀಕ್ಷಕ ಪಿ.ಕೃಷ್ಣಕಾಂತ್ ಪ್ರಶಂಸನೆಯನ್ನು ವ್ಯಕ್ತ ಪಡಿಸಿರುತ್ತಾರೆ ಹಾಗೂ ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಪೊಲೀಸರ ಸಹಾಯವನ್ನು ಪಡೆಯಲು 24×7 ಸಹಾಯವಾಣಿ ಇಆರ್‍ಎಸ್‍ಎಸ್-112 ಗೆ ಕರೆ ಮಾಡಲು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here