ಸಿಂಧನೂರು ನಗರದ ಕಾರುಣ್ಯ ದಂಪತಿಗಳಾದ ಶ್ರೀ ಚನ್ನಬಸಯ್ಯಸ್ವಾಮಿ ಹೀರೇಮಠ ಹರೇಟನೂರು ಹಾಗೂ ಶ್ರೀಮತಿ ಸುಜಾತ ಚನ್ನಬಸಯ್ಯಸ್ವಾಮಿ ಹೀರೇಮಠ ಹರೇಟನೂರು ಇವರ 22ನೇ ವಿವಾಹ ವಾರ್ಷಿಕೋತ್ಸವದ ವರ್ಷಾಚರಣೆಯನ್ನು ಕೆಕ್ ಕತ್ತರಿಸಿ, ಅವರಿಗೆ ಸನ್ಮಾನಿಸಿ, ಗುಲಾಬಿ ಗಿಡಗಳನ್ನು ನೀಡಿ ಶುಭಕೋರಲಾಯಿತು.
ಈ ಸಂದರ್ಭದಲ್ಲಿ ಜೀವ ಸ್ಪಂದನ ಸೇವಾ ಸಂಸ್ಥೆ ಕಾರ್ಯದರ್ಶಿ ಅವಿನಾಶ್ ದೇಶಪಾಂಡೆ, ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಂತೋಷ್ ಅಂಗಡಿ,ಸಮಾಜ ಸೇವಕಿ ಶ್ರೀಮತಿ ನಾಗವೇಣಿ ಪಾಟೀಲ್,ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಕಾರ್ಯದರ್ಶಿ ಅಶೋಕ್ ನಲ್ಲ, ಸದಸ್ಯ ಖಾಜಾ ಹುಸೇನ್ ಇದ್ದರು.