ಕನ್ನಡ ಧಾರಾವಾಹಿ ನಟ ದೀಪಕ್ ಮಹಾದೇವ್, ಚಂದನಾ ಮಹಾಲಿಂಗಯ್ಯ ನಿಶ್ಚಿತಾರ್ಥ

0
203

‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಖ್ಯಾತಿಯ ನಟ ದೀಪಕ್ ಹಾಗೂ ‘ಸೀತಾ ವಲ್ಲಭ’ ಧಾರಾವಾಹಿ ನಟಿ ಚಂದನಾ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ಅಧಿಕೃತ ಮಾಹಿತಿ ನೀಡಿದ್ದಾರೆ. ಕನ್ನಡ ಕಿರುತೆರೆ ನಟ ದೀಪಕ್ ಮಹಾದೇವ್ ಅವರು ನಟಿ ಚಂದನಾ ಮಹಾಲಿಂಗಯ್ಯ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಸಮಾರಂಭಕ್ಕೆ ಎರಡು ಕುಟುಂಬಗಳ ಕುಟುಂಬಸ್ಥರು, ಸ್ನೇಹಿತರು ಆಗಮಿಸಿದ್ದರು. ಕೊರೊನಾ ವೈರಸ್ ಕಾರಣದಿಂದಾಗಿ ಕೆಲವೇ ಕೆಲವು ಮಂದಿ ಸಾಕ್ಷಿಯಾಗಿ ದೀಪಕ್ ಹಾಗೂ ಚಂದನಾ ಉಂಗುರ ಬದಲಾಯಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಈ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದೆ. ಸಾಂಪ್ರದಾಯಿಕ ರೇಷ್ಮೆ ಸೀರೆಯಲ್ಲಿ ಚಂದನಾ ಕಾಣಿಸಿಕೊಂಡಿದ್ದರೆ, ದೀಪಕ್ ಬಂಗಾರದ ಶೇರ್ವಾನಿ ಧರಿಸಿದ್ದರು. ನಿಶ್ಚಿತಾರ್ಥದ ಫೋಟೋಗಳನ್ನು ಚಂದನಾ ಹಾಗೂ ದೀಪಕ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಜೋಡಿಗೆ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಸೇರಿದಂತೆ ಅನೇಕರು ಶುಭಾಶಯ ತಿಳಿಸುತ್ತಿದ್ದಾರೆ. “2021ರ ಜೂನ್ 1ರಂದು ನಿಶ್ಚಿತಾರ್ಥ ಮಾಡಿಕೊಂಡೆವು, ಆದಷ್ಟು ಬೇಗ ಶ್ರೀಮಾನ್, ಶ್ರೀಮತಿ ಆಗಲಿದ್ದೇವೆ. ನಿಮ್ಮೆಲ್ಲರ ಹಾರೈಕೆಗಳಿಗೆ ಧನ್ಯವಾದಗಳು. ಕೊರೊನಾ ಕಾರಣದಿಂದಾಗಿ ಆತ್ಮೀಯರನ್ನು ಕರೆಯಲಾಗಲಿಲ್ಲ. ಪರಿಸ್ಥಿತಿ ಸುಧಾರಿಸಿದರೆ ನಿಮ್ಮೆಲ್ಲರ ಹಾರೈಕೆ ನನ್ನ ಮದುವೆಗೆ ಸಿಗಬಹುದು ಎಂಬ ಆಶಯವಿದೆ” ಎಂದು ದೀಪಕ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿಕೊಂಡಿದ್ದಾರೆ. ದೀಪಕ್ ಹಾಗೂ ಚಂದನಾ ಕೆಲ ವರ್ಷಗಳಿಂದ ಪ್ರೀತಿ ಮಾಡುತ್ತಿದ್ದು, ಆದರೆ ಅವರ ಸಂಬಂಧದ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ನಿಶ್ಚಿತಾರ್ಥದ ಫೋಟೋ ಹಂಚಿಕೊಂಡು ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ. ಚಂದನಾ ಮಹಾಲಿಂಗಯ್ಯ ಅವರು ‘ಸೀತಾ ವಲ್ಲಭ’ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದರು. ದೀಪಕ್ ‘ನಾ ನಿನ್ನ ಬಿಡಲಾರೆ’ ಸೀರಿಯಲ್‌ನಲ್ಲಿ ಅಭಿನಯಿಸಿದ್ದರು. ಕೊನೆಯದಾಗಿ ದೀಪಕ್ ಅವರು ‘ನಾಯಕಿ’ ಧಾರಾವಾಹಿಯಲ್ಲಿ ನಟಿಸಿದ್ದು, ಟಿಆರ್‌ಪಿ ಕಡಿಮೆ ಇದ್ದು ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಆ ಸೀರಿಯಲ್ ಅಂತ್ಯವಾಯ್ತು. ಇನ್ನು ಚಂದನಾ ಅವರು ತೆಲುಗು ಕಿರುತೆರೆ ಲೋಕಕ್ಕೆ ಎಂಟ್ರಿ ನೀಡಿದ್ದಾರೆ.

LEAVE A REPLY

Please enter your comment!
Please enter your name here