ಮಾಜಿ ಶಾಸಕ ಶ್ರೀ ಹಂಪನಗೌಡ ಬಾದರ್ಲಿ ವತಿಯಿಂದ ಉಚಿತ ಆಕ್ಸಿಜನ್ ಸಿಲಿಂಡರ್ ಗಳ ವಿತರಣೆ

0
176

ಸಿಂಧನೂರು ನಗರದಲ್ಲಿ ಹಂಪನಗೌಡ ಬಾದರ್ಲಿ ಮಾಜಿ ಶಾಸಕರು ಹಾಗೂ ಅಧ್ಯಕ್ಷರು ಶ್ರೀ.ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಇವರ ಅಧ್ಯಕ್ಷತೆಯಲ್ಲಿ ಸರಕಾರಿ ಕೋವಿಡ್ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ 100 ಉಚಿತ ಪ್ರಾಣವಾಯು (ಆಕ್ಸಿಜನ್ ಸಿಲಿಂಡರ್) ವಿತರಣೆ ಕಾರ್ಯಕ್ರಮವು ಜರುಗಿತು

ನಂತರ ಮಾತನಾಡಿದ ಮಾಜಿ ಶಾಸಕರಾದ ಶ್ರೀ ಹಂಪನಗೌಡ ಬಾದರ್ಲಿ ರಾಜ್ಯಾದ್ಯಂತ ಮಹಾಮಾರಿ ಕೋರೋನ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಸರಕಾರಿ ಕೋವಿಡ್ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ 100 ಉಚಿತ ಪ್ರಾಣವಾಯು (ಆಕ್ಸಿಜನ್ ಸಿಲಿಂಡರ್) ವಿತರಣೆ ಮಾಡಲಾಗಿದೆ. ಎಷ್ಟೋ ಜನ ದೀನದಲಿತರು ಬಡವರು ಆಕ್ಸಿಜನ್ ಇಲ್ಲದೆ ಪರದಾಡುತ್ತಿದ್ದಾರೆ ಇನ್ನು ಸ್ವಲ್ಪ ಜನ ಆಕ್ಸಿಜನ್ ಇಲ್ಲದೆ ಸಾಯುತ್ತಿದ್ದಾರೆ ಹೀಗಾಗಿ ನಮ್ಮ ಕೈಲಾದಷ್ಟು ಸಹಾಯವನ್ನು ನಾವು ಮಾಡುತ್ತಿದ್ದೇವೆ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಿ ಎಂದು ಹೇಳಿದರು

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಬಿ.ಎನ್.ಪಾಟೀಲ್ ಅಧ್ಯಕ್ಷರು ರಾಜ್ಯ ಶಸ್ತ್ರ ಚಿಕಿತ್ಸಾ ವೈದ್ಯಕೀಯ ಸಂಘ ಬೆಂಗಳೂರು, ಡಾ.ಹನುಮಂತ ರೆಡ್ಡಿ ದೇಸಾಯಿ ಮುಖ್ಯ ವೈದ್ಯಾಧಿಕಾರಿ ಸರಕಾರಿ ಆಸ್ಪತ್ರೆ ಸಿಂಧನೂರು, ಡಾ.ಶರಣ ಬಸವ ದೇವರೆಡ್ಡಿ, ಡಾ.ಸರೋಷಾ ಪಾಟೀಲ್, ಶ್ರೀ.ಪಂಪನಗೌಡ ಬಾದರ್ಲಿ ಅಧ್ಯಕ್ಷರು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ, ಶ್ರೀ.ಅನಿಲ್ ಕುಮಾರ್.ವೈ ಪ್ರಧಾನ ಕಾರ್ಯದರ್ಶಿ ಬ್ಲಾಕ್ ಕಾಂಗ್ರೆಸ್ ಹಾಗೂ ಬ್ಯಾಂಕಿನ ನಿರ್ದೇಶಕ ಮಂಡಳಿ ಭಾಗವಹಿದ್ದರು.

LEAVE A REPLY

Please enter your comment!
Please enter your name here