ಬಳ್ಳಾರಿ ಜಿಲ್ಲಾ ಕಿಸಾನ್ ಕಾಂಗ್ರೇಸ್ ವತಿಯಿಂದ ‘ಕಿಸಾನ್ ವಿಜಯ ದಿವಸ್’ ಆಚರಣೆ

0
104

ಬಳ್ಳಾರಿ:ಡಿ:01:-ನಗರದಲ್ಲಿ ಇಂದು ಬೆಳಗ್ಗೆ 10:30 ಗಂಟೆಗೆ, ಸುಧಾಕ್ರಾಸ್ ಬಳಿ ಇರುವ ಗಾಂಧಿ ಪ್ರತಿಮೆ ಹತ್ತಿರ,ಕಿಸಾನ್ ವಿಜಯ ದಿವಸ್ ರಾಷ್ರ್ಟೀಯ ರೈತರ ದಿನವನ್ನು, ಬಳ್ಳಾರಿ ಜಿಲ್ಲಾ ಕಿಸಾನ್ ಕಾಂಗ್ರೇಸ್ ಅಧ್ಯಕ್ಷರಾದ ಮಾನ್ಯ ಶ್ರೀ ಮಾನ್ಯ0 ಶ್ರೀಧರ್ ಅವರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಮಹಾತ್ಮ ಗಾಂಧಿಯವರ ಪ್ರತಿಮೆಗೆ ಪುಷ್ಪ ನಮನಗಳನ್ನು ಸಲ್ಲಿಸಿ ಹಾಗೂ ಪಟಾಕಿಯನ್ನು ಹಾರಿಸಿ, ದೇಶದ ಬೆನ್ನೆಲುಬಾದ ರೈತರ ಶ್ರಮವನ್ನು ಸ್ಮರಿಸಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಹಾಗೂ ಕಾರ್ಮಿಕರ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡುವ ಮೂಲಕ ರೈತರನ್ನು ಸಂಕಷ್ಟಕ್ಕೀಡು ಮಾಡಿದ ಆ ಕಾಯ್ದೆಗಳನ್ನು ಹಿಂಪಡೆಯುವಂತೆ ರೈತ-ಕಾರ್ಮಿಕರ ಪರ ನಮ್ಮ ಕಾಂಗ್ರೆಸ್ ಪಕ್ಷ ಮಾಡಿದ ನಿರಂತರ ಹೋರಾಟಗಳನ್ನು ನೆನೆಯಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರುಗಳಾದ ಕಲ್ಲುಕಂಬ ಪಂಪಾಪತಿ, ಎಲ್.ಮಾರೆಣ್ಣ, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾದ ಎಂ.ಕುಮಾರಮ್ಮ, ಯತೀಂದ್ರ ಗೌಡ, ಪ್ರಧಾನ ಕಾರ್ಯದರ್ಶಿಗಳಾದ ಕಾಂತಿ ನೋಹ ವಿಲ್ಸನ್, ಐ.ಎನ್.ಟಿ.ಯು.ಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ತಾಯಪ್ಪ, ಮಹಾನಗರ ಪಾಲಿಕೆ ಸದಸ್ಯರಾದ ಕುಬೇರ, ಕಿಸಾನ್ ಘಟಕದ ಅಧ್ಯಕ್ಷರಾದ ಮನ್ಯಂ ಶ್ರೀಧರ್, ಎಸ್.ಸಿ.ಘಟಕದ ಅಧ್ಯಕ್ಷರಾದ ಯರಕುಲ ಸ್ವಾಮಿ, ಸೇವಾದಳ ಘಟಕದ ಅಧ್ಯಕ್ಷರಾದ ಮುರಾರ್ಜಿ ರೆಡ್ಡಿ, ಕಾರ್ಮಿಕ ಘಟಕದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೆಚ್.ಎರ್ರಿಸ್ವಾಮಿ, ಕೌಲ್ ಬಜಾರ್ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸಮೀರ್, ಕಿಸಾನ್ ಘಟಕದ ಬ್ಲಾಕ್ ಅಧ್ಯಕ್ಷರಾದ ದೇವೇಂದ್ರಪ್ಪ, ಮುಖಂಡರಾದ ಪೇಟಯ್ಯ, ನಾಗಭೂಷಣ ಗೌಡ, ಮಲ್ಲೇಶ್ವರಿ, ಲೋಕೇಶ್, ಯುವ ಮುಖಂಡರಾದ ಲಿಂಗರಾಜ, ಮಂಜುನಾಥ, ಅತ್ತಾವುಲ್ಲಾ, ಉದಯ್, ಸುಭಾನ್, ಅನ್ವರ್, ಖಾದರ್, ಹುಸೇನ್ ಸಾಬ್, ಖಾಜಾ ಖಾನ್, ಜ್ಯೋತಿ, ಫಾತಿಮ ಬೀಬಿ ಮತ್ತು ಅನೇಕ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here