ಪುನೀತ್ ರಾಜಕುಮಾರ್ ಹುಟ್ಟು ಹಬ್ಬದಂದು ಬಡ ಕುಟುಂಬಕ್ಕೆ ನೆರವು

0
245

ರಾಯಚೂರು:17:ಮಾ:- ಇಂದು ಸಿಂಧನೂರು ತಾಲೂಕಿನ ಹೊಸಳ್ಳಿ ಇಜೆ ಕ್ಯಾಂಪ್ ನಲ್ಲಿ ಜೀವ ಸ್ಪಂದನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದ ಅಂಗವಾಗಿ ಬಡ ಕುಟುಂಬಕ್ಕೆ ಮನೆಕಟ್ಟಲು ಸಿಮೆಂಟ್ ಚೀಲಗಳನ್ನು ದಾನಿಗಳು ಗಣೇಶ ಸ್ಟಿಲ್ ಅರವಿಂದ್ ಬದಿ, ರವಿ ಜವಳಗೇರಾ ಇವರ ನೆರವಿನಿಂದ ಟ್ರಸ್ಟ್ ಪದಾಧಿಕಾರಿಗಳು, ಹಿತೈಷಿಗಳ ಸಮ್ಮುಖದಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜೀವ ಸ್ಪಂದನ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಅವಿನಾಶ್ ದೇಶಪಾಂಡೆ, ಪುನೀತ್ ರಾಜ್ ಕುಮಾರ್ ತಮ್ಮ ಜೀವನದಲ್ಲಿ ಮಾನವೀಯತೆಯನ್ನು ರೂಢಿಸಿಕೊಂಡು,ನೊಂದವರಿಗೆ ಕಾಣದ ಕೈಯಾಗಿ ಸೇವೆಗೈದವರು ಇಂತಹವರ ಸೇವೆಗಳು ನಮ್ಮೆಲ್ಲರಿಗೆ ಪ್ರೇರಣೆ ಆಗಿವೆ. ಆದ್ದರಿಂದ ಇವರ ಹುಟ್ಟು ಹಬ್ಬದ ಈ ಸ್ಥಳದಲ್ಲಿ ಆಚರಿಸಿ, ಬಡ ಕುಟುಂಬಕ್ಕೆ ನೆರವು ನೀಡಲಾಯಿತು ಎಂದರು.

ಈ ಸಂದರ್ಭದಲ್ಲಿ ಜೀವ ಸ್ಪಂದನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ ನವೀನ್ ಕುಮಾರ್, ಸದಸ್ಯ ಚನ್ನವೀರನಗೌಡ, ಯುವ ಮುಖಂಡ ಶಿವರಾಜ್ ರಾಮರೆಡ್ಡಿ, ಅಶೋಕ್ ಕೆ, ವೆಂಕಟೇಶ್ವರ ಆಗ್ರೋಸ್ ಮಾಲೀಕ ನೆಕ್ಕಂಟಿ ಸುರೇಶ್, ಕಾರುಣ್ಯ ವೃದ್ಧಾಶ್ರಮದ ಆಡಳಿತಾಧಿಕಾರಿ ಚನ್ನಬಸಯ್ಯಸ್ವಾಮಿ ಹಿರೇಮಠ ಹರೇಟನೂರು, ಮಾಜಿ ನಾಮನಿರ್ದೇಶನ ಸದಸ್ಯರಾದ ಪ್ರಶಾಂತ್ ಕಿಲ್ಲೇದ್, ಹೊಸಳ್ಳಿ ಇಜೆ ಗ್ರಾಮಪಂಚಾಯತ್ ಅಧ್ಯಕ್ಷ ಎನ್ ನಾಗಲಿಂಗಪ್ಪ, ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಕಾರ್ಯದರ್ಶಿ ಅಶೋಕ್ ನಲ್ಲ, ಸದಸ್ಯ ಖಾಜಾಹುಸೇನ, ಗ್ರಾಮದ ಮುಖಂಡರು ಸೇರಿದಂತೆ ಹಲವರಿದ್ದರು.

LEAVE A REPLY

Please enter your comment!
Please enter your name here