ಆಂಧ್ರ ಪ್ರದೇಶದ ಬಿಜೆಪಿ ಹಿರಿಯ ಮುಖಂಡರು, ಸಿಂಧನೂರಿನ ವಿಜಯ್ ಕಲರ್ ಲ್ಯಾಬ್ ಮಾಲೀಕರಾದ ವಿಶ್ವನಾಥ ಚೌಧರಿ ಅವರ ಆತ್ಮೀಯ ಗೆಳೆಯರಾಗಿದ್ದ ಪೈಡಕೊಂಡಲ ಮಾಣಿಕ್ಯದ ರಾವ್ ಅವರ ಪ್ರಥಮ ಪುಣ್ಯ ಸ್ಮರಣೆ ಅಂಗವಾಗಿ ಸಿಂಧನೂರಿನ ಪಿಡಬ್ಲ್ಯೂಡಿ ಕ್ಯಾಂಪಿನ ಆಶಾಕಿರಣ ಬಡ ಮಕ್ಕಳ ಅನಾಥಾಶ್ರಮದ ಮಕ್ಕಳಿಗೆ ಬೆಳಿಗ್ಗೆ ಉಪಹಾರ ಮಾಡಿಸಿದರು.
ನಂತರ ನಿರಂತರವಾಗಿ ಸಿಂಧನೂರು ತಾಲೂಕ ಮತ್ತು ನಗರಾದ್ಯಂತ ಹಸಿರು ಸಿಂಧನೂರು ಮಾಡಲು ಶ್ರಮಿಸುತ್ತಿರುವ ವೆಂಕಟೇಶ್ವರ ಆಗ್ರೋಸ್ ಮಾಲೀಕರಾದ ಶ್ರೀ ನೆಕ್ಕಂಟಿ ಸುರೇಶ್ ಹಾಗೂ ನಗರಸಭೆ ಸದಸ್ಯರಾದ ಶ್ರೀ ದಾಸರಿ ಸತ್ಯನಾರಾಯಣರಾವ್ ಅವರಿಗೆ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಲಯನ್ ಪದ್ಮನಾಯ್ಡು, ವೀರಾರೆಡ್ಡಿ ಜವಳಗೇರಾ, ಸತೀಶ್ ಕಿಶೋರ್ , ಶ್ರೀನಿವಾಸ, ಇದ್ದರು