ಕೊಟ್ಟೂರು ಗ್ರಂಥಾಲಯಕ್ಕೆ ಬಿ ಕೆ ಲಕ್ಷ್ಮಿ ಕಿರಣ್ ಮೆಚ್ಚುಗೆ,”ಗ್ರಂಥಾಲಯಕ್ಕೆ ಬೇಟಿ ನೀಡಿ ದಾಖಲಾತಿ ಪರಿಶೀಲನೆ”

0
588

ಕೊಟ್ಟೂರು:ಸೆ:10:-ಕೊಟ್ಟೂರು ಸಾರ್ವಜನಿಕ ಗ್ರಂಥಾಲಯಕ್ಕೆ ಬಳ್ಳಾರಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕರಾದ ಶ್ರೀಮತಿ ಬಿ ಕೆ ಲಕ್ಷ್ಮಿ ಕಿರಣ್ .
ಸಹ ಗ್ರಂಥಪಾಲಕರಾದ ಎಸ್ ಟಿ ಪ್ರಭಾಕರ್ ಹಾಗು ಬಳ್ಳಾರಿ ನಗರ ಕೇಂದ್ರ ಗ್ರಂಥಾಲಯದ
ಮುಖ್ಯ ಗ್ರಂಥಾಲಯ ಅಧಿಕಾರಿ ನರಸಪ್ಪ ಇವರುಗಳು ಭೇಟಿ ನೀಡಿದ್ದರು.

ದಾಖಲಾತಿಗಳನ್ನು ಪರಿಶೀಲಿಸಿ ಗ್ರಂಥಾಲಯದ ಕಾರ್ಯ ನಿರ್ವಹಣಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು
ಸ್ಪರ್ಧಾತ್ಮಕ ಓದುಗರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಹೇಗೆ ಯಾವ ರೀತಿ ಓದಿನಲ್ಲಿ ಮುಂದುವರಿಯಬೇಕು ಎಲ್ಲಾ ಮಾಹಿತಿಯನ್ನು ತಿಳಿಸಿದರು.

ಡಿಜಿಟಲ್ ಗ್ರಂಥಾಲಯದ ಬಗ್ಗೆ ಮಾಹಿತಿ ನೀಡಿ ಲಾಗಿನ್ ಆಗಿ ಹತ್ತು ಲಕ್ಷಕ್ಕೂ ಹೆಚ್ಚು ಸ್ಪರ್ಧಾತ್ಮಕ ಪುಸ್ತಕ ಮತ್ತು ಶೈಕ್ಷಣಿಕ ವಿಡಿಯೋಗಳನ್ನು ಓದಲು ಮಾರ್ಗದರ್ಶನ ತೋರಿಸಿದರು.ಹೆಚ್ಚು ಸೌಲಭ್ಯಗಳನ್ನು ದೊರಕಿಸಿ ಕೊಡುತ್ತೇವೆ ಎಂದು ಹೇಳಿದರು.

ಕೊಟ್ಟೂರು ಸಾರ್ವಜನಿಕ ಗ್ರಂಥಾಲಯದ ಪುಸ್ತಕ ವಿಭಾಗ ಸೋರುತ್ತಿರುವುದನ್ನು ಗಮನಿಸಿ ಕ್ಷೇತ್ರದ ಶಾಸಕರಾಗಿ ಶ್ರೀ ಎಸ್ ಭೀಮ ನಾಯ್ಕಇವರನ್ನು ಸಂಪರ್ಕಿಸಿ ಸುಂದರ ಕಟ್ಟಡ ನಿರ್ಮಿಸಲು ಕೇಳಿಕೊಳ್ಳುತ್ತೇವೆ ಎಂದು ಹೇಳಿದರು. ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಆಶೀರ್ವಾದ ಪಡೆದರು
ಈ ಸಂದರ್ಭದಲ್ಲಿ ಗ್ರಂಥಾಲಯಾಧಿಕಾರಿ
ಮಲ್ಲಪ್ಪ ಗುಡ್ಡಾನೂರು ಗ್ರಂಥಾಲಯ ಸಿಬ್ಬಂದಿಗಳಾದ ಶ್ರೀನಿವಾಸ ಪತ್ತಾರ. ವಿದ್ಯಾವತಿ ಓದುಗರು,ಸದಸ್ಯರು ಇದ್ದರು

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here