ತೋರಿಕೆಯ ಬದುಕಿಗೆ ಜೋತುಬಿದ್ದು ನಮ್ಮತನ ಕಳೆದುಕೊಳ್ಳುತ್ತೇವೆ;ಡಾ. ಬಾಗ್ಯಲಕ್ಷ್ಮೀ ಭರಾಡೆ

0
93

ಹೊಸಪೇಟೆ ಜು16: ತೋರಿಕೆಯ ಬದುಕಿನ ಆಸೆಗೆ ಬಿದ್ದು ನಮ್ಮನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಎಂದು ಉಪನ್ಯಾಸಕರಾದ ಡಾ.ಭಾಗ್ಯಲಕ್ಷ್ಮಿ ಭರಾಡೆ ಅಭಿಪ್ರಾಯಪಟ್ಟರು. ಅವರು ವಿಕಾಸ ಬ್ಯಾಂಕಿನ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ ಆನ್ಲೈನ್ ನಲ್ಲಿ ನಡೆದ ಮಹಿಳಾ ವಿಕಾಸ ಕಾರ್ಯಕ್ರಮದ ಭಾಗವಾಗಿ ಸ್ವಯಂ ಕಾಳಜಿ ವಿಷಯದ ಕುರಿತು ಉಪನ್ಯಾಸ ನೀಡಿದರು.

ಕೂಡು ಕುಟುಂಬವಿದ್ದಾಗ ಪರಸ್ಪರ ಕಾಳಜಿ ಇರುತ್ತಿತ್ತು, ಆದರೆ ಇಂದು ವಿಭಕ್ತ ಕುಟುಂಬಗಳು ಹೆಚ್ಚಾಗಿರುವುದರಿಂದ ನಮ್ಮ ಆರೋಗ್ಯದ ಬಗ್ಗೆ ನಾವೇ ಕಾಳಜಿ ವಹಿಸಬೇಕಾಗುತ್ತದೆ, ಅದರಲ್ಲೂ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕೆಂದರು. ಸೌಕರ್ಯದ ಜೀವನದ ಆಸೆಗೆ ಬಿದ್ದು, ಒಳಗೆಲ್ಲೊ ನಾವು ಒಂಟಿತನ ಅನುಭವಿಸುತ್ತಿದ್ದೇವೆ. ಎಲ್ಲದರಲ್ಲೂ ಸಕಾರಾತ್ಮಕ ಆಲೋಚನೆಯನ್ನು ಅಳವಡಿಸಿಕೊಳ್ಳುವ ಮೂಲಕ ಆನಂದದಿಂದ ಹಾಗೂ ನೆಮ್ಮದಿಯಿಂದ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳೋಣ ಎಂಬ ಸಲಹೆ ನೀಡಿದರು.

ವರದಿ:-ಪಿ.ವಿ.ಕಾವ್ಯ

LEAVE A REPLY

Please enter your comment!
Please enter your name here