ವಿಜಯನಗರ:ಆಗಸ್ಟ್ :08:ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಹೊಸಳ್ಳಿಯಲ್ಲಿ ಹಾಲುಮತ ಸಮಾಜದ ಚೆನ್ನಮ್ಮ ಅವರ ಮನೆಗೆ ರಘು ಗುಜ್ಜಲ್ ಅವರು ಭೇಟಿ ನೀಡಿ ಮಹಿಳಾ ಕಾಂಗ್ರೆಸ್ ಮತ್ತು ಬೆಲೆ ಏರಿಕೆ ಪರಿಸ್ಥಿತಿಯ ಕುರಿತು ಚರ್ಚಿಸಿ ನಂತರ ಕಾನಹೊಸಹಳ್ಳಿಯ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವೃತ್ತಕ್ಕೆ ಮಾಲಾರ್ಪಣೆ ಮಾಡಿದರು.
ನಂತರ ಗಾಣಗಟ್ಟೆ,ನಿಂಬಳಗೆರೆ ಗ್ರಾಮಕ್ಕೆ ತೆರಳಿ ಶಕ್ತಿದೇವತೆ ಗಾಣಗಟ್ಟೆ ಮಾಯಮ್ಮನ ದೇವಸ್ಥಾನಕ್ಕೆ ರಘು ಗುಜ್ಜಲ್ ಅವರು ಶ್ರಾವಣ ಮಾಸದ ಅಮಾವಾಸ್ಯೆಯ ಪ್ರಯುಕ್ತ ದೇವಿಯ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಸೈಯದ್ ಶುಕೂರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬೋರಣ್ಣ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಸತೀಶ್, ಗ್ರಾಮ ಪಂಚಾಯತಿ ಸದಸ್ಯರಾದ ಚೇತನ್, ಮಂಜುನಾಥ್, ರಾಘು, ಗಿರೀಶ್, ಕುವೆಂಪು, ಕಾಂಗ್ರೆಸ್ ಯುವ ಮುಖಂಡರಾದ ಸೂರ್ಯಪ್ರಕಾಶ್, ವಿಕ್ರಮ್ ಸಿಂಗ್, ಜಯಣ್ಣ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರು ಗಂಗಾಧರ್ ಟಿ, ಪರಶುರಾಮ್, ಶ್ರೀಧರ್, ರಾಘವೇಂದ್ರ, ಡ್ರೈವರ್ ಜಯಣ್ಣ, ಅಜ್ಜಪ್ಪ, ಗ್ಯಾರೇಜ್ ಸ್ವಾಮಿ, ರಂಗನಾಥ್ ಹಳ್ಳಿ ಅಜ್ಜಣ್ಣ ಮತ್ತು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ವರದಿ:-ಮಂಜುನಾಥ್