ಜನಮನ ಸೂರೆಗೊಂಡ ಸುಗಮ ಸಂಗೀತ ಕಾರ್ಯಕ್ರಮ

0
163

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ನಾಗರಾಜ ದೇವಸ್ಥಾನ ಟ್ರಸ್ಟ್ ವತಿಯಿಂದ ಬಸ್ ನಿಲ್ದಾಣದ ಹತ್ತಿರ ದಿನಾಂಕ 10/08/2022 ರ ವರದಂದು ಜಿಎಸ್ ರಾಜಶೇಖರ್ ಇವರ ನೇತೃತ್ವದಲ್ಲಿ ಸುಗಮ ಸಂಗೀತ ಕಾರ್ಯಕ್ರಮ ನಡೆಸಲಾಯಿತು , ಮುಖ್ಯ ಅತಿಥಿಗಳಾಗಿ ಕೋಡಿಹಳ್ಳಿ ರೇವಣ್ಣ ಭಾಗವಹಿಸಿದ್ದರು , ಇದೇ ವೇಳೆ ಮಾತನಾಡಿದ ಕಾರ್ಯದರ್ಶಿ ನಾಗರಾಜ್ ನಮ್ಮ ಮನಸ್ಸಿನಲ್ಲಿ ಅಡಗಿರುವ ಗೊಂದಲ ಹಾಗೂ ದುಗುಡ ಮನಸ್ಥಿತಿಯನ್ನು ಸುಗಮ ಸಂಗೀತ ಆಲಿಸುವುದರ ಮೂಲಕ ನಿವಾರಿಸಿಕೊಳ್ಳಬಹುದು ಎಂದು ಕಾರ್ಯಕ್ರಮದಲ್ಲಿ ತಿಳಿಸಿದರು , ಕಾರ್ಯಕ್ರಮದಲ್ಲಿ ಹಂಸದನಿರಾಗ, ದುರ್ಗರಾಗ, ಸೋಹನಿ ರಾಗ ದಲ್ಲಿ ಹಾಡಿ ಜನರನ್ನು ರಂಜಿಸಲಾಯಿತು , ಇದೆ ವೇಳೆ ಕಾರ್ಯಕ್ರಮದಲ್ಲಿ ಹಾರ್ಮೋನಿಯಂ ಸಾತಿ ಜಂಬೂರ್ ಕುಮಾರಸ್ವಾಮಿ, ತಬಲ ಸಾತಿ ಕೆ ಪಂಪಣ್ಣ , ನಟರಾಜ ಬಜನಾ ಸಂಘದ ಅಧ್ಯಕ್ಷರಾದ ಅರಮನೆ ಮಹೇಶ್ ಉಪಸ್ಥಿತರಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾಭಾರತಿ ಶಾಲೆಯ ಮುಖ್ಯೋಪಾಧ್ಯಾಯರಾದ ಹನಸಿ ಚಿರಂಜೀವಿ ನಡೆಸಿಕೊಟ್ಟರು

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here