ಕೊಟ್ಟೂರು:ಆಗಸ್ಟ್:20:-
ತಾಲೂಕ ಕಛೇರಿಯ ಮಹಾತ್ಮಗಾಂಧೀಜಿ ಸಭಾಂಗಣದಲ್ಲಿ ಕರ್ನಾಟಕದ ದಿ.ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜು ಅರಸು ರವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ತಹಶೀಲ್ದಾರರಾದ ಎಂ.ಕುಮಾರಸ್ವಾಮಿ ಇವರು ಸನ್ಮಾನ್ಯ ದೇವರಾಜು ಅರಸು ರವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡುವುದರೊಂದಿಗೆ ಚಾಲನೆ ನೀಡಿದರು.
ಈ ಸಮಯದಲ್ಲಿ ಬಿಸಿಎಂ ಇಲಾಖೆಯ ಶಿವಲೀಲ ನಿಲಯ ಮೇಲ್ವಿಚಾರಕಿ, ನಿಲಯ ಸಿಬ್ಬಂದಿಯಾದ ರೇವಣ್ಣ ಸೊಕ್ಕಿ, ಗೌರಮ್ಮ, ನಮೀನಾಬಾನು, ಶೃತಿ, ಶಿವರಾಜು ತಾಲೂಕ ಕಛೇರಿಯ ಶಿರಸ್ತೇದಾರರಾದ ನಾಗರಾಜ, ಕಛೇರಿಯ ಸಿಬ್ಬಂದಿ ಹಾಜರಿದ್ದರು. ಈಬಾರಿ ವಿಜಯನಗರ ಜಿಲ್ಲಾ ಮಟ್ಟದಲ್ಲಿ ಅದ್ದೂರಿಯಾಗಿ ಆಚರಣೆಯನ್ನು ಮಾಡಲಿರುವುದರಿಂದ ಬಿಸಿಎಂ ಇಲಾಖೆಯ ಎಲ್ಲಾ ಅಧಿಕಾರಿಗಳು ಹೊಸಪೇಟೆಯಲ್ಲಿ ಹಾಜರಿದ್ದರಿಂದ ಸರಳವಾಗಿ ಆಚರಿಸಲಾಯಿತು.