ಕೊಟ್ಟೂರು: ತಾಲೂಕಿನ ಕೆ. ಅಯ್ಯನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಹರಾಳು ಗ್ರಾಮದ ಪೂಜಾರ್ ಕೊಟ್ರಪ್ಪ ಎಂಬುವರ ಎರಡು ಎಕರೆ ಬೆಳೆದಿದ್ದ ಈರುಳ್ಳಿ ಬೆಳೆಯು ಸಂಪೂರ್ಣ ಮಳೆಯಿಂದಾಗಿ ಕೊಚ್ಚಿ ಹೋಗಿದೆ.
ಸತತ ಕೊಟ್ಟೂರು ತಾಲೂಕಿನಲ್ಲಿ ಮೂರು ದಿನಗಳಿಂದ ಸುರಿತ್ತಿರುವ ಮಳೆಯಿಂದಾಗಿ ತಾಲೂಕಿನ ಅನೇಕ ಭಾಗದಲ್ಲಿ ಬೆಳೆ ನಷ್ಟವಾಗಿದೆ ಹರಾಳು ಗ್ರಾಮದ ಪೂಜಾರಿ ಕೊಟ್ರಬಸಪ್ಪ ತಂದೆ ಕೊಟ್ರಪ್ಪ 522/ಡಿ 1.76 ಹಾಗೂ ಮೇಗಳಮನೆ ಹಾಲಪ್ಪ ಬಿನ್ ಪೂಜಾರಿ ಕೆಂಚವ್ವ 522/ಡಿ 1.77ಎಂಬುವವರ ಸೇರಿದ ಹೊಲದಲ್ಲಿ ಕಟಾವಿಗೆ ಬಂದಿದ್ದ ಈರುಳ್ಳಿ ಬೆಳೆಯು ಅತಿಯಾದ ಮಳೆಯಿಂದಾಗಿ ಸಂಪೂರ್ಣ ಈರುಳ್ಳಿ ಬೆಳೆಯು ಕೊಚ್ಚಿ ಹೋಗಿದೆ,
![](https://haisandur.com/wp-content/uploads/2022/10/IMG-20221002-WA0168.jpg)
ಇದಕ್ಕೆ ಕಾರಣ ಪಕ್ಕದಲ್ಲಿ ಹಗರಿ ಹಳ್ಳದ ನೀರಿನ ಹರಿವು ಹೆಚ್ಚಾಗಿ ಕಟ್ಟೆಯು ಹೊಡೆದು ಬೆಳೆದಿದ್ದ ಹೊಲಗಳಿಗೆ ನೀರು ನುಂಗಿದವೇ ಆದರಿಂದ ಬೆಳೆದಿದ್ದ ಬೆಳೆಯು ನೀರು ಪಾಲಾಗಿವೆ ಸಂಬಂಧಪಟ್ಟ ಕಂದಾಯ ಇಲಾಖೆಯ ಅಧಿಕಾರಿಗಳು ನಷ್ಟಕ್ಕೆ ಒಳಗಾಗಿರುವ ರೈತರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಎಂದು ಪತ್ರಿಕೆ ಮುಂದೆ ತಮ್ಮ ನೋವನ್ನು ವ್ಯಕ್ತಪಡಿಸಿದರು
ವರದಿ: ಶಿವರಾಜ್ ಕನ್ನಡಿಗ