ಕೊಟ್ಟೂರು: ತಾಲೂಕಿನಲ್ಲಿ ಶುಕ್ರವಾರದಂದು ಪ್ರವಾಸಿ ಮಂದಿರದಲ್ಲಿ ಸಿಪಿಐ ತಾಲೂಕು ಸಮಿತಿ ಪದಾಧಿಕಾರಿಗಳ ಸಭೆ ಕರೆಯಲಾಗಿದ್ದು ಸಭೆಗೆ ಜಿಲ್ಲಾ ಕಾರ್ಯದರ್ಶಿಗಳಾದ ಹೆಚ್ ವೀರಣ್ಣ ಸಹಕಾರದರ್ಶಿಗಳಾದ ಗುಡಿಹಳ್ಳಿ ಹಾಲೇಶ್ ಉಪಸ್ಥಿತರಿದ್ದು .
ಸಿಪಿಐ ಪಕ್ಷದ ತಾಲೂಕು ಗಜಾಂಚಿಗಳಾದ ಪ್ರಕಾಶಣ್ಣ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದ್ದು ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದು ವಿದ್ಯಾರ್ಥಿ ಯುವಜನ ಸಂಘಟನೆ ತಾಲೂಕಿನಲ್ಲಿ ಪ್ರಬಲವಾಗಿ ಕಟ್ಟಬೇಕು ರೈತ ಸಂಘಟನೆ ಕಾರ್ಮಿಕ ಸಾಮೂಹಿಕ ಸಂಘಟನೆಗಳನ್ನ ಪ್ರಬಲಗೊಳಿಸಿ ಸಿಪಿಐ ಪಕ್ಷವನ್ನು ತಾಲೂಕಿನದ್ದಂತ ಪ್ರಬಲವಾಗಿ ಕಟ್ಟಿ ನೂತನ ಕೊಟ್ಟೂರು ತಾಲೂಕಿಗೆ ಮೂಲಸೌಕರ್ಯಗಳಿಲ್ಲದೆ ಮೂಲೆಗುಂಪಾಗಿದ್ದು.
ಸೌಲಭ್ಯಗಳಿಗಾಗಿ ತಾಲೂಕು ಅಭಿವೃದ್ಧಿಗಾಗಿ ಸಿಪಿಐ ಪಕ್ಷದ ನೇತೃತ್ವದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಹೋರಾಟ ನಡೆಸಬೇಕೆಂದು ತೀರ್ಮಾನಿಸಲಾಯಿತು.
ಕೊಟ್ಟೂರು ತಾಲೂಕು ಕಾರ್ಯದರ್ಶಿಗಳಾದ ಗಜಾಪುರ ರೇಣುಕಮ್ಮ. ಸಹಕಾರದರ್ಶಿಗಳಾದ ವಿಠಲ್. ಬಿ ರೇಣುಕಮ್ಮ. ಶಂಕ್ರಪ್ಪ ಮರಿಗೌಡ ಹಾಗೂ ಕೂಡ್ಲಿಗಿ ತಾಲೂಕ್ ಕಟ್ಟಡ ಕಾರ್ಮಿಕರ ಅಧ್ಯಕ್ಷರು ಪಕ್ಷದ ಖಜಾಂಚಿಗಳು ಭಾಗವಹಿಸಿದ್ದರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿ ಹೋರಾಟ ಮಾಡಲು ತೀರ್ಮಾನಿಸಲಾಯಿತು.
ವರದಿ:- ಶಿವರಾಜ್ ಕನ್ನಡಿಗ