ಕೊಟ್ಟೂರು: ಪಟ್ಟಣದ ಮಾಜಿ ಪಟ್ಟಣ ಪಂಚಾಯತಿ ಸದಸ್ಯರಾದ ಹಾಗೂ ಕೊಟ್ಟೂರೇಶ್ವರ ಕಾಲೇಜ್ ಆಡಳಿತ ಮಂಡಳಿ ಸದಸ್ಯ ಅಡಕಿ ಮಂಜುನಾಥ ರವರು ಮಂಗಳವಾರ ಬಿಜೆಪಿ ಪಕ್ಷ ತೊರೆದು ಜಿಂದಾಲ್ ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು
ನಂತರ ಸುದ್ದಿಗಾರರೊಂದಿಗೆ ಮಾತನಾಡಿ ನಮ್ಮ ತಂದೆಯವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಪ್ರಧಾನ ಮಂತ್ರಿ ಹಾಗೂ ರಾಜ್ಯಪಾಲರ ಕಡೆಯಿಂದ ಸನ್ಮಾನಗೊಂಡಂತವರು ಆಗಿನ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಸಿದ್ದಾಂತ ಒಪ್ಪಿಕೊಂಡು ಪಕ್ಷದ ಮೇಲೆ ಅತ್ಯಂತ ಗೌರವ ಹೊಂದಿದವರಾಗಿದ್ದರು ಇದರಿಂದಾಗಿ ನಾನು ಮೂಲ ಕಾಂಗ್ರೆಸ್ ಪಕ್ಷದ ನಿಷ್ಠೆ ಕಾರ್ಯಕರ್ತನಾಗಿದ್ದು ಕಾಂಗ್ರೆಸ್ ಪಕ್ಷದಲ್ಲಿ ಸಣ್ಣ ಪುಟ್ಟ ಅಸಮಾಧಾನದಿಂದ ಬಿಜೆಪಿ ಪಕ್ಷ ಸೇರ್ಪಡೆಗೊಂಡೇ ಆದರೆ ಈ ಪಕ್ಷದಲ್ಲಿನ ಸಿದ್ದಾಂತಗಳು ಸರಿಹೋಗದ ಕಾರಣ ಹಾಗೂ ಊರಿನ ಹಿರಿಯ ಮುಖಂಡ ಎಂ ಎಂ ಜೆ ಹರ್ಷವರ್ಧನ್ ರವರು ನನ್ನ ಮನವೊಲಿಸುವಲ್ಲಿ ಪ್ರಮುಖರಾಗಿದ್ದಾರೆ ಇದರಿಂದಾಗಿ ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಅತ್ಯಂತ ಸಂತೋಷ ವಾಗಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಶಾಸಕ.ಭೀಮನಾಯ್ಕ್, ಮಾಜಿ ಶಾಸಕ.ಸಂತೋಷ್ ಲಾಡ್, ಹಡಗಲಿ ಶಾಸಕ. ಪಿ ಟಿ ಪರಮೇಶ್ವರ ನಾಯ್ಕ್ ಆಕರ್ಷ, ಪ್ರಸಾದ್, ಮುಂತಾದವರು ಇದ್ದರು.
ವರದಿ: ಶಿವರಾಜ್ ಕನ್ನಡಿಗ