ವಿಜಯನಗರ(ಹೊಸಪೇಟೆ) :ಆ:13:-
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಕೊಡಮಾಡುವ ರಾಜ್ಯಮಟ್ಟದ ಡಾ.ಎಚ್.ನರಸಿಂಹಯ್ಯ ಸ್ಮಾರಕ ಪ್ರಶಸ್ತಿಗೆ ಕೃಷಿ, ಸಾಮಾಜಿಕ, ಸಾಹಿತ್ಯ, ಸಾಂಸ್ಕೃತಿಕ, ವೈಚಾರಿಕತೆ, ವೈಜ್ಞಾನಿಕತೆ, ಪತ್ರಕರ್ತರು, ರಂಗಭೂಮಿ ಕಾಲವಿದರು, ಜಾನಪದ ಕಲಾವಿದರು, ಶಿಕ್ಷಕರು ಸೇರಿದಂತೆ ವೈಜ್ಞಾನಿಕತೆಯನ್ನು ಮೈಗೂಡಿಸಿಕೊಂಡು ಸಮಾಜ ಮುಖಿಯಾಗಿ ಹೋರಾಡುತ್ತಿರುವ ವಿಜಯನಗರ ಜಿಲ್ಲೆಯ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಡಿ.28 ಹಾಗೂ 29 ರಂದು ತುಮಕೂರಿನಲ್ಲಿ ಎರಡು ದಿನಗಳ ಕಾಲ ನಡೆಯುವ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನದಲ್ಲಿ ರಾಜ್ಯದ ಪ್ರತಿ ಜಿಲ್ಲೆಯಿಂದ ಒಬ್ಬ ಸಾಧಕರನ್ನು ಗುರುತಿಸಿ ಎಚ್.ಎನ್. ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ಹಾಗಾಗಿ ಆಸಕ್ತರು ಅರ್ಜಿ ಜತೆಗೆ ಸೂಕ್ತ ದಾಖಲಾತಿಗಳನ್ನು ಅ.30ರ ಒಳಗಾಗಿ ಸಲ್ಲಿಸಬೇಕು ಎಂದು ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ್ ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ 9945950001
ಸಂಪರ್ಕಿಸಲು ಕೋರಲಾಗಿದೆ.