“ಕರ್ನಾಟಕ ಪತ್ರಕರ್ತರ ಸಂಘ” ದ ಸಂಡೂರು ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ

0
848

ಸಂಡೂರು.ಜುಲೈ.22.ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀಯುತ ಮುರುಗೇಶ್ ಶಿವಪೂಜೆ ಅವರ ಸೂಚನೆಯ ಮೇರೆಗೆ, ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು
ತಾಲೂಕಿನ ಸಂಘದ ಎಲ್ಲ ಪದಾಧಿಕಾರಿಗಳ ಒಮ್ಮತದಂತೆ, ಸಂಡೂರು ತಾಲೂಕಿನ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ರಾಜ್ಯ ಕಾರ್ಯದರ್ಶಿ ಕೆ.ಗೋಪಾಲ್, ಅವರು ಸಂಡೂರು ತಾಲೂಕು ಘಟಕಕ್ಕೆ ಹಿರಿಯ ಪತ್ರಕರ್ತ, ಸಾಹಿತಿಗಳು ಆರ್.ಶಿವರಾಮ್ ರವರನ್ನು ಗೌರವಾಧ್ಯಕ್ಷರನ್ನಾಗಿ ಹಾಗೂ ಉಪಾಧ್ಯಕ್ಷರಾಗಿ ಸಂಜೆವಾಣಿ ಪತ್ರಿಕೆಯ ತಾಲೂಕು ವರದಿಗಾರ ಅರಳಿ ಕುಮಾರಸ್ವಾಮಿ ಹಾಗೂ ಅಂಜಿನಪ್ಪ ಛಲವಾದಿ, ಸಿ. ಈಶ್ವರಪ್ಪ ರವರನ್ನು ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಪ್ರಜಾವಾಹಿನಿ ಪತ್ರಿಕೆಯ ತಾಲೂಕು ವರದಿಗಾರ ರಾಜು ಪಾಳೆಗಾರ್, ಸಹ ಕಾರ್ಯದರ್ಶಿಯಾಗಿ ತೋರಣಗಲ್ಲು ಪ್ರಜಾವಾಣಿ ವರದಿಗಾರ ಎರ್ರಿಸ್ವಾಮಿ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಡಿ.ಬಸವರಾಜ್ ಹಾಗೂ ಸದಸ್ಯರಾಗಿ ಆಂದ್ರಜ್ಯೋತಿ ತೆಲುಗು ಪತ್ರಿಕೆಯ ತೋರಣಗಲ್ಲು ವರದಿಗಾರ ರಾಜೇಂದ್ರ ಅವರುಗಳನ್ನು ತಾಲೂಕು ಕಾರ್ಯಕಾರಿ ಸಮಿತಿಗೆ ಸದಸ್ಯರಾಗಿ ನೇಮಕಮಾಡಿ ಆದೇಶ ಹೊರಡಿಸಿದ್ದಾರೆ.

ಸಂಡೂರು ತಾಲ್ಲೂಕಿನ ಅಧ್ಯಕ್ಷರು ಹಾಗೂ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ
ಕೆ.ಗೋಪಾಲ್,ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ನಂತರ ಸಂಘದ ದ್ಯೆಯೋದ್ದೇಶ ಹಾಗೂ
ಕಾರ್ಯಚಟುವಟಿಕೆಗಳ ಬಗ್ಗೆ ಸವಿಸ್ತಾರವಾಗಿ ವಿವರಿಸುತ್ತ ಮಾತನಾಡಿ..

ಈ ಸಂಘವು ರಾಷ್ಟ್ರೀಯ ಹಾಗೂ ರಾಜ್ಯದ ಮಾನ್ಯತೆಯನ್ನು ಪಡಿದಿರುತ್ತದೆ. ಬೇರೆ ಬೇರೆ ಸಂಘಗಳಂತೆ ಬರಿ ಪತ್ರಕರ್ತರಾದವರಿಗೆ ಮಾತ್ರ ಗುರುತಿನ ಪತ್ರ (ಮೀಡಿಯಾ ಕಾರ್ಡ್) ನೀಡದೆ ಪತ್ರಿಕೆಗಳನ್ನು ಹಂಚುವವರಿಗೆ. ಪತ್ರಿಕೆಗಳ ಏಜಂಟರುಗಳಿಗೂ ನೀಡುವ ಸೌಲಭ್ಯ ಈ ಕರ್ನಾಟಕ ಪತ್ರಕರ್ತರ ಸಂಘದಲ್ಲಿ ಇದೆ.

ರಾಜ್ಯದಲ್ಲಿ ಪ್ರಮುಖವಾಗಿ ಗ್ರಾಮೀಣ ಬಾಗದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ಸದಾಕಾಲ ಸಭೆ ಸಮಾರಂಭಗಳೆಂದು ಓಡಾಡುವ ಪತ್ರಕರ್ತರು ಅನೇಕ ಬಾರಿ ಅಪಘಾತಗಳಿಗೆ ಒಳಗಾಗಿ ಎಷ್ಟೋ ಬಾರಿ ಚಿಕಿಸ್ಥೆಗೆ ಹಣ ಇಲ್ಲದೆ ಪರದಾಡುವ ಸ್ಥಿತಿ ಎದುರಿಸುತ್ತಾರೆ ಎಷ್ಟೋ ಬಾರಿ ಸಮಾಜ ಕಂಟಕರಿಂದ ಹಲ್ಲೆಗೆ ಒಳಗಾಗುತ್ತಾರೆ ಅಂಥವರಿಗೆ ಸಹಾಯವಾಗಲೆಂದು ಸಂಘವು ಸದಸ್ಯ ಪತ್ರಕರ್ತರಿಗೆ ಎರಡು ಲಕ್ಷ ರೂಪಾಯಿಗಳ ಜನತಾ ಅಪಘಾತ ವಿಮಾ ಸೌಲಭ್ಯವನ್ನು ಕಳೆದ ಹಲವಾರು ವರ್ಷಗಳಿಂದ ನೀಡಲಾಗುತ್ತಿದೆ ಅಪಘಾತದಿಂದ ನಿಧನರಾಗುವ ಸದಸ್ಯರ ಸಂಬಂಧಿಕರಿಗೆ 2 ಲಕ್ಷ ರೂ.ಮತ್ತು ಅಪಘಾತದಿಂದ ಆಸ್ಪತ್ರೆಗೆ ದಾಖಲಾಗುವ ಸದಸ್ಯರಿಗೆ ಗರಿಷ್ಠ 35 ಸಾವಿರ ರೂ.ಗಳ ಚಿಕಿತ್ಸೆ ವೆಚ್ಚವನ್ನು ನೀಡಲಾಗುತ್ತಿದೆ.

ಈ ಯೋಜನೆ ನಮ್ಮ ಸಂಘದಲ್ಲಿ ಮಾತ್ರ ಇದೆ ಈ ಸೌಲಭ್ಯದ ಲಾಭವನ್ನು ವಿವಿಧ ಜಿಲ್ಲೆಗಳ ಪತ್ರಕರ್ತರು ಪಡೆದುಕೊಂಡಿದ್ದಾರೆ. ಇದಲ್ಲದೆ ವಿವಿಧ ಜಿಲ್ಲೆಗಳ ಎಂಟು ಸದಸ್ಯರು ಸೇರಿ ಪತ್ರಕರ್ತರಿಗಾಗಿ “ಕರ್ನಾಟಕ ಜರ್ನಲಿಸ್ಟ್ ಯೂನಿಯನ್” ಟ್ರಸ್ಟ್ (ಇಂಡಿಯನ್ ಟ್ರಸ್ಟ್ ಕಾಯಿದೆ) ಒಂದನ್ನು ಸ್ಥಾಪಿಸಿ ತಮ್ಮ ಸ್ವಂತ (ಟ್ರಸ್ಟಿ ಗಳಿಂದ ವೈಯಕ್ತಿಕ ವಂತಿಕೆ) ಹಣವನ್ನು ಒಂದು ನಿಧಿ ಮಾಡಿ ಫಿಕ್ಸ್ ಡಿಪಾಸಿಟ್ ಮಾಡಲಾಹಿತು ಪ್ರತಿ ವರ್ಷ ಈ ನಿಧಿಯಿಂದ ಬರುವ ಬಡ್ಡಿ ಹಣವನ್ನು ಮಾತ್ರ ಕಷ್ಟದಲ್ಲಿರಿವ ಪತ್ರಕರ್ತರಿಗೆ ಸಹಾಯ ಮಾಡುವ ಕಾರ್ಯವನ್ನು ಹಲವಾರು ವರ್ಷಗಳಿಂದ ನಡೆಸಲಾಗುತ್ತಿದೆ ಪ್ರತಿವರ್ಷ ಈ ಟ್ರಸ್ಟ್ ಮೂಲ ನಿಧಿಯನ್ನು ಬಳಸದೆ ಬಡ್ಡಿ ಹಣವನ್ನು ಮಾತ್ರ ಅತಿ ಅಗತ್ಯ ಇರುವ ಪತ್ರಕರ್ತರಿಗೆ. ಹಿರಿಯ ಪತ್ರಕರ್ತರ ಚಿಕೆತ್ಸೆ ಮತ್ತು ಅಕಾಲ ಮರಣಕ್ಕೆ ತುತ್ತಾಗುವ ಪತ್ರಕರ್ತರ ಮಕ್ಕಳ ವಿದ್ಯಾಭ್ಯಾಸಕ್ಕೆ ಕನಿಷ್ಠ ಸಹಾಯ ಮಾಡುವ ಕಾರ್ಯಕ್ಕೆ ಬಳಸಲಾಗುತ್ತಿದೆ.

ಪತ್ರಕರ್ತರಿಗೆ ಸಾಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ “ಕರ್ನಾಟಕ ಪತ್ರಕರ್ತರ ವಿವಿದ್ದೋದ್ದೇಶಗಳ ಸಹಕಾರಿ ಸಂಘ” ಒಂದನ್ನು ಐದು ವರ್ಷಗಳ ಹಿಂದೆ ಸ್ಥಾಪಿಸಲಾಹಿತು.500 ಕ್ಕೂ ಅಧಿಕ ಸದಸ್ಯರನ್ನು ಹೊಂದಿರಿವ ಈ ಸಂಘವು ಸದ್ಯಕ್ಕೆ ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕಾರ್ಯವ್ಯಾಪ್ತಿಯನ್ನು ಹೊಂದಿದೆ. ಶೀಘ್ರದಲ್ಲೇ ಗದಗ.ಬಳ್ಳಾರಿ.ಮಂಗಳೂರು. ಚಿಕ್ಕಮಗಳೂರು.ಜಿಲ್ಲೆಗಳಲ್ಲಿಯೂ ತನ್ನ ಕಾರ್ಯ ಆರಂಭಿಸುವ ಯೋಜನೆ ಹೊಂದಿದೆ.

ಪತ್ರಕರ್ತರು ತಮ್ಮ ಪತ್ರಿಕೆಗಳಲ್ಲಿ ದೈನಂದಿನ ವರದಿಗಳನ್ನು ಸಿದ್ಧಪಡಿಸಲು ಕಿ.ಮೀ.ಗಟ್ಟಲೆ ಸ್ವಂತ ಸ್ಥಳದಿಂದ ಹೋಗಬೇಕಾಗುತ್ತದೆ. ಆ ಕಾರಣಕ್ಕಾಗಿ ಸರ್ಕಾರದ ಮಟ್ಟದಲ್ಲಿ ಪತ್ರಕರ್ತರಿಗೆ ಉಚಿತವಾಗಿ ಬಸ್ ಪಾಸ್ ಮತ್ತು ರೈಲ್ವೆ ಪಾಸ್ ಸೌಲಭ್ಯಗಳ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ.ಇನ್ನು ಕೆಲ ದಿನಗಳಲ್ಲಿ ಅದು ಸಹ ಈ ಕರ್ನಾಟಕ ಪತ್ರಕರ್ತರ ಸಂಘದ ಸದಸ್ಯರಿಗೆ ಸಿಗುವುದು ಖಚಿತ ಎಂದು ಹೇಳಿದರು

LEAVE A REPLY

Please enter your comment!
Please enter your name here