ಬಿಇಒ ಮತ್ತು ಡಿಡಿಪಿಐ ಗೆ ಜಾಣ ಮರೆವು; ಅಘೋಷಿತ ರಜೆ ನೀಡಿದ ಬಂಡ್ರಿ ಕೆಪಿಎಸ್ ಶಾಲೆ, ಸರ್ಕಾರದ ಆದೇಶಕ್ಕಿಲ್ಲ ಕವಡೆಕಾಸಿನ ಕಿಮ್ಮತ್ತು;

0
574

ಸಂಡೂರು:ಡಿ:06:-ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಚೋರನೂರು ಹೋಬಳಿ ವ್ಯಾಪ್ತಿಯ ಬಂಡ್ರಿ ಗ್ರಾಮದಲ್ಲಿನ ಕೆಪಿಎಸ್ ಶಾಲೆ ಸರ್ಕಾರಿ ಶಾಲೆಗಳೆಲ್ಲಾ ಎಕಾ ಏಕಿ ಅಘೋಷಿತ ರಜೆಯನ್ನು ಮಾಡಿದದ್ದಾರು ಏಕೆ ಎಂಬುದಕ್ಕೆ ಶಾಲೆ ಕಾಲೇಜಿನ ಪ್ರಾಂಶುಪಾಲರು,ಉಪ ಪ್ರಾಂಶುಪಾಲರು ಹಾಗೂ ಮುಖ್ಯಗುರುಗಳಿಂದ ಸರಿಯಾದ ಉತ್ತರ ಸಿಗುತ್ತಿಲ್ಲ ಎಲ್ಲವೂ ಹಾರಿಕೆಯ ಉತ್ತರವಾಗಿತ್ತೆ ವಿನಃ ನಿಖರವಾದ ಉತ್ತರವಿರಲಿಲ್ಲ.

ದಿನಾಂಕ 06.12.2022ರಂದು ಇಡೀ ರಾಜ್ಯದಲ್ಲೇ ಶಾಲಾ ಕಾಲೇಜ್ ಗಳು ತೆರೆದು ಶಿಕ್ಷಕರು ಮಕ್ಕಳಿಗೆ ಪಾಠಗಳನ್ನು ಬೋಧಿಸುತ್ತಿದ್ದರೆ ಬಂಡ್ರಿ ಗ್ರಾಮದ ಶಾಲೆಗಳು ಮಾತ್ರ ಬಾಗಿಲುಗಳನ್ನು ಮುಚ್ಚಿ ಬಂದ್ ಮಾಡಿದ್ದರು, ಸ್ಥಳೀಯ ಗ್ರಾಮದಲ್ಲಿ ಯಾವುದೇ ಹಬ್ಬ ಹರಿದಿನಗಳಿರಲಿಲ್ಲ, ಸೋಮವಾರ 05.12.2022 ಹಿಂದಿನ ದಿನ ಗ್ರಾಮದಲ್ಲಿ ಬಸವೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಇತ್ತು, ಅದು ಹಗಲು ಹೊತ್ತೇನಲ್ಲ.. ರಾತ್ರಿ ಸಮಯದಲ್ಲಿ ದೇವಸ್ಥಾನಕ್ಕೆ ಹೋಗಿ ದೇವರಿಗೆ ಪೂಜೆ ಮಾಡಿ ದೀಪವನ್ನು ಹಚ್ಚಿ ಬರುವುದು

ಮಂಗಳವಾರದಂದು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರದೆ ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಂಡು ಸರ್ವಾಧಿಕಾರಿಯಂತೆ ಘೋಷಣೆ ಮಾಡಿಕೊಂಡಿರುವುದು ನಿಯಮಬಾಯಿರವಾಗಿದೇ ಇದನ್ನು ಡಿಡಿಪಿಐ ಅಂದಾನಪ್ಪ ವಡಗೇರಿ ಹಾಗೂ ಬಿಇಒ ಮೈಲೇಶ್ ಬೇವೂರ್ ಅವರುಗಳಿಗೆ ದೂರವಾಣಿ ಮುಖಾಂತರ ತಿಳಿಸಿದಾಗ ಇದು ನಮ್ಮ ಗಮನಕ್ಕೆ ಬಂದಿಲ್ಲ ಹಾಗಾಗಿ ಸಂಬಂಧಪಟ್ಟ ಶಾಲೆಯ ಮುಖ್ಯಸ್ಥರೊಡನೆ ಮಾತನಾಡುತ್ತೇನೆ ಎಂದು ಹೇಳಿದರೆ ಹೊರತು ಯಾಕೆ ಈಗೆ ಮಾಡಿದರು, ಶಾಲೆಗಳು ಮಂಗಳವಾರದಂದು ತೆರೆಯದಿರುವುದಕ್ಕೆ ಕಾರಣವೇನು..? ಸಂಬಂದಪಟ್ಟವರ ಮೇಲೆ ಯಾವ ಕ್ರಮವನ್ನು ಕೈಗೊಳ್ಳದೇ ಸುಮ್ಮನಿರುವುದಾದರು ಏಕೆ..? ಎಲ್ಲವೂ ನಿಗೂಢವಾಗಿದೆ.

ಯಾವುದೇ ಸರ್ಕಾರಿ ಶಾಲೆಗಳಲ್ಲಿ ಸ್ಥಳೀಯ ರಜೆಯನ್ನು ಘೋಷಣೆಮಾಡಬೇಕಾದರೆ ಎಸ್ಟಿಎಂಸಿ ಹಾಗೂ ಶಿಕ್ಷಕರೊಡನೆ ಒಂದು ಸಭೆಯನ್ನು ನಡೆಸಿ ಅದರ ಅನುಮೋದನೆಗಾಗಿ ಸಭೆಯ ನಡಾವಳಿಗಳನ್ನು ಬಿಇಒ ಅವರ ಹತ್ತಿರ ಮನವಿಯನ್ನು ಕೊಟ್ಟು ರಜೆ ಘೋಷಣೆಗೆ ಅನುಮತಿಯನ್ನು ಪಡೆಯಬೇಕೆಂಬುದು ನಮಗೂ ಹಾಗೂ ನಿಮಗೂ ಗೊತ್ತಿರುವ ಪ್ರಾಥಮಿಕ ತಿಳುವಳಿಕೆಯ ವಿಷಯ,

ಇಂತಹ ಒಂದು ಪ್ರಾಥಮಿಕ ತಿಳುವಳಿಕೆ ಗೊತ್ತಿಲ್ಲದಿದ್ದರೆ ಅವರುಗಳು ಇನ್ನು ಹೇಗೆ ಪ್ರಾಂಶುಪಾಲ ಹಾಗೂ ಮುಖ್ಯಗುರುಗಳ ಹುದ್ದೆಯನ್ನು ನಿಭಾಯಿಸಬಲ್ಲರು ಹಾಗೇ ಇವರುಗಳು ಮಕ್ಕಳಿಗೆ ಇನ್ಯಾವ ರೀತಿಯಾದ ಜ್ಞಾನರ್ಜನೆಗಾಗಿ ಪಾಠಗಳನ್ನು ಹೇಳುತ್ತಿರಬವುದೆಂದು ನಾವು ನೀವು ಊಹಿಸಿಕೊಳ್ಳಬೇಕಾಗುತ್ತದೆ.

■ಇದರ ಬಗ್ಗೆ ಇಸಿಓ ಪಾಲಕ್ಷಪ್ಪ, ಅವರನ್ನು ದೂರವಾಣಿ ಮುಖೇನ ಸಂಪರ್ಕಿಸಿದಾಗ ಲೋಕಲ್ ಹಾಲಿ ಡೇ ಎಂದು ಯಾವಾಗಲಾದರೂ ಬಿಇಓ ಹತ್ತಿರ ನಾಲ್ಕೈದು ಪರ್ಮಿಶನ್ ತಗೊಂಡು ಸಹಿ ಮಾಡಿಕೊಂಡಿರುತ್ತಾರೆ, ಅದನ್ನು ಈಗ ಬಳಸಿಕೊಂಡು ರಜೆ ಕೊಟ್ಟಿದ್ದಾರೆ, ರಜೆ ಕೊಟ್ಟಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಿದರು,

■ಹಾಗೇ ಸಿ ಆರ್ ಪಿ ನಾಗರಾಜ್ ಅವರನ್ನು ಕೇಳಿದಾಗ ಲೋಕಲ್ ರಜೆ ಬಿಡುತ್ತೇವೆ ಎಂದು ಕೇಳಿದರು ನಾನು ಅಗಲಿ ಎಂದು ಹೇಳಿದೆ,ಎಂದರು

■ಕೆಪಿಎಸ್ ಶಾಲೆಯ ಮುಖ್ಯ ಗುರುಗಳಾದ ಎಂ ಡಿ ನಾಗೇಶ್ ಅವರಿಗೆ ಹಲವು ಬಾರಿ ದೂರವಾಣಿ ಮಾಡಿದರು ಕರೆ ಸ್ವೀಕರಿಸಲಿಲ್ಲ, ಈ ಅಭ್ಯಾಸ ಈತನಿಗೆ ಇದೇ ಮೊದಲೆಲ್ಲಾ ಬಿಡಿ.

■ನಂತರ ಪ್ರೌಡ ಶಾಲೆಯ ಉಪ ಪ್ರಾಂಶುಪಾಲ ಬಸವರಾಜ್ ಕಂಕ್ರಿ ಅವರನ್ನು ಕೇಳಿದರೇ, ಮಕ್ಕಳು ಕೇಳಿದ್ರು ರಜೆಯನ್ನು ಕೊಟ್ಟಿದ್ದೇನೆ, ಹಾಗೇ ನಂತರ ಸಿ ಆರ್ ಪಿ ನಾಗರಾಜ್ ಅವರು ಸಹ ಹೇಳಿದ್ರು ಅಂತ ಹೇಳಿದರು

ಸಕಾರಣ ಸಂಬಂಧಿಸಿದ ಡಿಡಿಪಿಐ, ಬಿಇಓ ಅವರಲ್ಲಿ ನಾವು ಮನವಿಯನ್ನು ಮಾಡುವುದಿಷ್ಟೇ ಡಿಪಿಇಪಿ, ಕೆಪಿಎಸ್ ಪ್ರೌಢ, ಪ್ರಾಥಮಿಕ, ಕಾಲೇಜ್ ಪ್ರಾಂಶುಪಾಲರು,ಉಪ ಪ್ರಾಂಶುಪಾಲರು, ಮುಖ್ಯ ಶಿಕ್ಷಕರು ಕರ್ತವ್ಯ ಲೋಪ, ಬೇಜವಾಬ್ದಾರಿತನದಿಂದ ಕೂಡಿರುವುದು ಕಂಡುಬಂದಿದೆ- ಸದರಿ ಕರ್ತವ್ಯಲೋಪವು ಕೆ ಸಿ ಎಸ್ ಅರ್ ನ ನಿಯಮ ಸಿಸಿಎ ನಿಯಮ ( ನಡತೆ, ಮೇಲ್ಮನವಿ) 3(¡) (¡¡) (¡¡¡) ಗಳನ್ನು ಉಲ್ಲಂಘಿಸಿದ್ದಾರೆ, ಸಂಬಂಧಿಸಿದವರ ಮೇಲೆ ತನಿಖೆಯನ್ನು ಮಾಡಿ ಸೂಕ್ತ ಕ್ರಮಗಳನ್ನು ಕೈಗೊಂಡು ಸ್ಪಸ್ಟಿಕರಣವನ್ನು ನೀಡಿ

ಕೊರೊನಾದಿಂದ ಮಕ್ಕಳು ಆಗಲೇ ಒಂದುವರೇ ವರ್ಷದ ದಿನಗಳನ್ನು ಕಳೆದುಬಿಟ್ಟಿದ್ದಾರೆ,ಇತ್ತೀಚಿನ ದಿನಗಳಲ್ಲಿ ಮಕ್ಕಳು ಶಾಲೆ ಕಡೆಗೆ ಹೆಚ್ಚಿನ ಹೋಗಲು ಆಸಕ್ತಿ ವಹಿಸಿದ್ದಾರೆ ಈಗ ತಾನೇ ಶಾಲೆಗಳು ಆರಂಭವಾಗಿ ಮಕ್ಕಳು ಉತ್ಸುಕರಾಗಿ ಶಾಲೆಗಳ ಕಡೆಗೆ ಬರಲಾರಂಭಿಸಿದ್ದಾರೆ ಇಂತಹ ದಿನಗಳಲ್ಲಿ ಶಾಲೆಗಳು ಅದರ ಮುಖ್ಯಸ್ಥರು ಈಗೇ ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವುದು ಸರೀನಾ ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ ಡಿಡಿಪಿಐ ಹಾಗೂ ಬಿಇಒ ಅವರುಗಳು ಮಕ್ಕಳ ಹಿತದೃಷ್ಟಿಯಿಂದ ಹಾಗೂ ಶಿಕ್ಷಣ ಇಲಾಖೆಯ ಮಾನ- ಮರ್ಯಾದೆಯ ಪ್ರಶ್ನೆಯಾಗಿದ್ದು ಯೋಚಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕಾಗಿದೆ ಅಲ್ಲಿಯವರೆಗೂ ಕಾಯ್ದು ನೋಡೋಣ.

LEAVE A REPLY

Please enter your comment!
Please enter your name here