ಸಂಡೂರು:ಜ:23:- ತಾರಾನಗರ ಕ್ಲಸ್ಟರ್ ನ ಕೋವಿಡ್ ಪಾಸಿಟಿವ್ ಬಂದವರ ಟ್ರಿಯೇಜ್ (ಚಿಕಿತ್ಸಾ ಸರದಿ ನಿರ್ಧಾರ) ಮಾಡಲು ಕೃಷ್ಣಾ ನಗರದ ಗ್ರಾಮೋದಯ ಮೊಬೈಲ್ ಮೆಡಿಕಲ್ ಯುನಿಟ್ ನ್ನು ನಿಯೋಜಿಸಲಾಗಿದ್ದು ಇಂದು ದೌಲತ್ ಪುರದ ಒಂದು ಪ್ರಕರಣ ಮತ್ತು ತಾರಾನಗರದ ಮೂರು ಪ್ರಕರಣಗಳನ್ನು ಬೇಟಿ ಮಾಡಿ ಟ್ರಿಯೇಜ್ ಮಾಡಲಾಗಿದ್ದು ನಾಲ್ಕು ಜನರು ಆರೋಗ್ಯವಾಗಿದ್ದು ಸಾಮಾನ್ಯ ಲಕ್ಷಣಗಳು ಇದ್ದು ನಾಲ್ವರಿಗೂ ಮೆಡಿಸಿನ್ ಕಿಟ್ ನೀಡಿ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ, ಸೋಂಕು ಹರಡದಂತೆ ಸುರಕ್ಷಿತ ಮಾರ್ಗ ಸೂಚಿಗಳನ್ನು ಅನುಸರಿಸುವಂತೆ ಡಾ. ನಂದಿನಿ ಸೂಚಿಸಿದ್ದಾರೆ,
ಈ ಸಂದರ್ಭದಲ್ಲಿ ಮೊಬೈಲ್ ಮೆಡಿಕಲ್ ಯುನಿಟ್ ನ ಡಾ.ನಂದಿನಿ, ಲ್ಯಾಬ್ ತಂತ್ರಜ್ಞ ರಾದ ನಿವೇದಿತಾ, ಆರೋಗ್ಯ ಸುರಕ್ಷಾಧಿಕಾರಿ ಕೊಟ್ರಮ್ಮ, ಫಾರ್ಮಸಿ ಅಧಿಕಾರಿ ಆನಂತ್ ಆಶಾ ಕಾರ್ಯಕರ್ತೆ ಶಂಶದ್ ಬೇಗಂ, ಶ್ರೀದೇವಿ, ಪರ್ವೀನಾ, ಶೋಭಾ ಇತರರು ಉಪಸ್ಥಿತರಿದ್ದರು