ಸಂಡೂರು:ಸೆ:09:-ಸಂಡೂರು ತಾಲ್ಲೂಕಿನ ದೌಲತಪುರ ಗ್ರಾಮದ ಸಿಂಗಿನಕೆರೆಕೆ ಭರ್ತಿಯಾಗಿದ್ದು, ಗಂಗಾ ಪೂಜೆ ಹಾಗೂ ಬಾಗಿನ ಅರ್ಪಣೆಯನ್ನು ಕೃಷ್ಣಾನಗರ ಗ್ರಾಮ ಪಂಚಾಯಿತಿ ಸದಸ್ಯೆ ವಿಜಯಲಕ್ಷ್ಮಿ ನೆರವೇರಿಸಿದರು. ಗಂಗಾ ಪೂಜೆ ಹಾಗೂ ಬಾಗಿನ ಅರ್ಪಣೆ ನಂತರ ವಿಜಯಲಕ್ಷ್ಮಿ ಮಾತನಾಡಿ, ಕಳೆದ ನಾಲ್ಕೈದು ವರ್ಷಗಳಿಂದ ಗ್ರಾಮದಲ್ಲಿ ದನಕರುಗಳಿಗೆ ಸೇರಿದಂತೆ ಕುಡಿಯುವ ನೀರು, ಮೇವಿನ ಸಮಸ್ಯೆ ತಲೆದೋರಿತ್ತು.
ಇಂತಹ ಸಂದರ್ಭದಲ್ಲಿ ಕೆಲ ದಿನಗಳಿಂದ ರಾಜ್ಯದೆಲ್ಲೆಡೆ ಹಾಗೂ ನಮ್ಮ ತಾಲೂಕಿನಾಧ್ಯಂತ ವರುಣನ ಕೃಪಾ ಕಟಾಕ್ಷದಿಂದ ಮಳೆ ಬಂದು ಹಲವಾರು ಕೆರೆ, ಕಟ್ಟೆಗಳಿಗೆ ನೀರು ಅಲ್ಪ ಸ್ವಲ್ಪ ಬಂದಿದೆ.ಕೆಲಕಡೆ ಕೆರೆಗಳು ತುಂಬಿ ಕೊಡಿಬಿದ್ದಿವೆ, ಕೆರೆ, ಹಳ್ಳ ಕೊಳ್ಳಗಳು ಹರಿದಿರುವುದರಿಂದ ಕುಡಿಯುವ ನೀರಿನ ಅಭಾವ ತಪ್ಪಿದಂತಾಗಿದೆ. ವಿಶೇಷವಾಗಿ ನಮ್ಮ ದೌಲತಪುರ ಗ್ರಾಮದ ಪುರಾತನದ ಸಿಂಗಿನಕೆರೆ ಭರ್ತಿಯಾಗಿದೆ, ಇದರಿಂದ ದನ ಕರುಗಳಿಗೆ ಮೇವಿನ ಕೊರತೆ ನೀಗಿದಂತಾಗಿದೆ. ನಮ್ಮ ರೈತರ ಮೊಗದಲ್ಲಿ ಸಂತಸವನ್ನು ತಂದಿದೆ ಆದ್ದರಿಂದ ಇನ್ನು ಮುಂದೆ ಪ್ರತಿಯೊಬ್ಬರು ಒಂದೊಂದು ಗಿಡವನ್ನು ನೆಟ್ಟು ಕಾಡನ್ನು ಬೆಳೆಸಿದ್ದೆ ಆದಲ್ಲಿ ಮಳೆಯ ತೊಂದರೆಯಾಗುವುದಿಲ್ಲ ಎಂದು ತಿಳಿಸಿದರು
ಈ ಸಂಧರ್ಭದಲ್ಲಿ ಶಿಲ್ಪ, ಲಲಿತಮ್ಮ, ನಾಗರತ್ನಮ್ಮ, ಗಂಗಮ್ಮ, ಗೀತಾ ಹಾಗೂ ಇತರರಿದ್ದರು