ವೈಭವದಿಂದ ನಡೆದ ಘೋರ್ಪಡೆ ರಾಜವಂಶದ ಬಹಿರ್ಜಿ ಘೋರ್ಪಡೆ ಜೊತೆ ವೈಷ್ಣವಿ ರಾಜೆ ಅವರ ವಿವಾಹ ಮಹೋತ್ಸವ

0
150

ಸಂಡೂರು:ಡಿ:15:-ಸ್ಕಂದಸಿರಿ ಸಂಡೂರು ಪಟ್ಟಣದಲ್ಲಿ ಇತ್ತೀಚೆಗೆ 11.12.2022 ರಂದು ಸಂಡೂರಿನ ಎಸ್ ಆರ್ ಎಸ್ ಶಾಲೆಯ ಗೋಲ್ಡನ್ ಜ್ಯೂಬಿಲಿ ಹಾಲ್‍ನಲ್ಲಿ ಸಂಡೂರಿನ ಘೋರ್ಪಡೆ ರಾಜವಂಶದ ಬಹಿರ್ಜಿ ಘೋರ್ಪಡೆ ಹಾಗೂ ವೈಷ್ಣವಿ ರಾಜೆ ಅವರ ವಿವಾಹ ಅತ್ಯಂತ ವೈಭವದಿಂದ ಜರುಗಿತು.

ಬಹಿರ್ಜಿ ಘೋರ್ಪಡೆಯವರು ಮಾಜಿ ಮಂತ್ರಿಗಳೂ, ಅಂತರಾಷ್ಟ್ರೀಯ ಛಾಯಚಿತ್ರಕಾರರೂ, ರಾಜಕೀಯ ಮುತ್ಸದ್ದಿಯೂ, ಬರಹಗರಾರೂ, ಚಿಂತಕರೂ, ಶಿಕ್ಷಣ ಪ್ರೇಮಿಯೂ ಸಕಲ ಕಲಾ ಪ್ರೇಮಿಯೂ ಆದ ದಿ.ಶ್ರೀ ಎಂ.ವೈ.ಘೋರ್ಪಡೆ ಮತ್ತು ದಿ. ವಸುಂಧರಾ ರಾಜೇ ಘೋರ್ಪಡೆ ಅವರ ಮೊಮ್ಮಗ ಮತ್ತು ಶ್ರೀಮಂತ ಅಜಯ್ ರಾಜೇ ಮತ್ತು ಶ್ರೀಮತಿ ಸೂರ್ಯಪ್ರಭ ಅಜಯ್ ರಾಜೇ ಘೋರ್ಪಡೆಯವರ ಜೇಷ್ಠ ಪುತ್ರರಾಗಿದ್ದಾರೆ

ವೈಷ್ಣವಿ ರಾಜೇ ಅವರು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪಿಲಿವ್‍ನ ದಿವಂಗತ ಅಜಿತ್‍ಸಿಂಹ ಬಾಳಾಸಾಹೇಬ್ ಜಹಗೀರ್‍ದಾರ್ ರಾಜೇ ಭೋಸಲೆ ಮತ್ತು ಶ್ರೀಮತಿ ಸಂಗೀತಾ ರಾಜೇ ಅಜಿತ್‍ಸಿಂಹ ಜಹಗೀರ್‍ದಾರ್ ರಾಜೇ ಭೋಸಲೆ ಅವರ ಮೊಮ್ಮಗಳು. ಮತ್ತು ಶ್ರೀಮಂತ ಸಮರ್ಜಿತ್‍ರಾಜೇ ಅಜಿತ್‍ಸಿಂಹ ಜಹಗೀರ್‍ದಾರ್ ರಾಜೇ ಭೋಸಲೆ ಮತ್ತು
ಎ.ಸೌ. ಸುಚಿತ್ರಾ ಸಮರ್ಜಿತ್‍ರಾಜೇ ಜಹಗೀರ್‍ದಾರ್ ರಾಜೇ ಭೋಸಲೆ ಅವರ ಪುತ್ರಿಯಾಗಿದ್ದಾರೆ.

ಪ್ರಸ್ತುತ ಬಹಿರ್ಜಿ ಘೋರ್ಪಡೆಯವರು ಇಂದಿನ ಸ್ಮಯೋರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಬಹರ್ಜಿ ಅವರ
ಮದುವೆಗೆ ಸಚಿವರಾದ ಆನಂದ್ ಸಿಂಗ್, ಮಾಜಿ ಸಚಿವರಾದ ಹೆಚ್ ಕೆ ಪಾಟೀಲ, ಕೆ.ಸಿ. ಕೊಂಡಯ್ಯ ಅಲ್ಲದೇ ಅನೇಕ ರಾಜಕಾರಣಿಗಳು ಮತ್ತು ಗಣ್ಯ ವ್ಯಕ್ತಿಗಳಲ್ಲದೇ ದೇಶದ ವಿವಿದ ರಾಜ್ಯಗಳ ರಾಜ ವಂಶಸ್ಥರು ಈ ವಿವಾಹ ಶುಭ ಸಂದರ್ಭದಲ್ಲಿ ಸಾಕ್ಷಿಯಾಗಿದ್ದರು.

LEAVE A REPLY

Please enter your comment!
Please enter your name here