ವಿಜಯನಗರ:ಸಂತಶ್ರೇಷ್ಠ ಭಕ್ತ ಕನಕದಾಸ ಜಯಂತಿ ಆಚರಣೆ

0
111

ವಿಜಯನಗರ.ನ.22 :ವಿಜಯನಗರ ಜಿಲ್ಲಾಡಳಿತದ ವತಿಯಿಂದ ಸಂತಶ್ರೇಷ್ಠ ಭಕ್ತ ಕನಕದಾಸರ ಜಯಂತಿಯನ್ನು ಸೋಮವಾರ ಆಚರಿಸಲಾಯಿತು.
ನಗರದ ಕನಕ ವೃತ್ತದಲ್ಲಿರುವ ಸಂತಶ್ರೇಷ್ಠ ಭಕ್ತಕನಕದಾಸರ ಪ್ರತಿಮೆಗೆ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಎಸ್.ಕೆ.,ಜಿಪಂ ಸಿಇಒ ಡಾ. ಹರ್ಷಲ್ ನಾರಾಯಣರಾವ್,ತಹಸೀಲ್ದಾರ್ ವಿಶ್ವನಾಥ, ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ ಮತ್ತಿತರರು ಇದ್ದರು.
ಹೊಸಪೇಟೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಲಾಯಿತು.
ತಹಸೀಲ್ದಾರರಾದ ಗುರುಬಸವರಾಜ, ಕಾರ್ತಿಕ್, ಕಚೇರಿ ಸಿಬ್ಬಂದಿ ವರ್ಗ ಇದ್ದರು.

LEAVE A REPLY

Please enter your comment!
Please enter your name here