ಕೊಟ್ಟೂರು;
ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಭಾಗವಾಗಿರುವ ಕೊಟ್ಟೂರು ಪಟ್ಟಣದ ಕೋಲಾಶಾಂತೇಶ್ವರ ಶಾಲೆ ಹತ್ತಿರ ಇಂದು ನೂತನ ಕಾಂಗ್ರೆಸ್ ಪಕ್ಷದ ಜನಸಂಪರ್ಕ ಕಛೇರಿಯನ್ನು ಹಗರಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಸನ್ಮಾನ್ಯ ಜನಪ್ರಿಯ ಶಾಸಕರಾದಂತಹ ಎಸ್ .ಭೀಮ ನಾಯ್ಕ್ ರವರು. ಕಛೇರಿ ಉದ್ಘಾಟನೆ ಮಾಡಿದರು. ನಂತರ ಶಾಸಕರ ನೇತ್ರತ್ವದಲ್ಲಿ ಕೊಟ್ಟೂರು ಪಟ್ಟಣ ತಾಲೂಕಿನ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯ ಕ್ರಮ ಮತ್ತು ಹರಾಳು, ಚಪ್ಪರದಹಳ್ಳಿ, ರಾಮನಾಯಕನಹಳ್ಳಿ, ಕೆ.ಅಯ್ಯನಹಳ್ಳಿ, ಕನ್ನನಾಯಕಕಟ್ಟಿ, ಪ್ರಚಾರಕಾರ್ಯಕ್ರಮ ಕೈಗೊಂಡರು.
ಈ ಸಂದರ್ಭದಲ್ಲಿ ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ದಾರುಕೇಶ್, ಕೆ.ಪಿ.ಸಿ.ಸಿ.ಸದಸ್ಯರಾದ ದೂಪದಹಳ್ಳಿ ಮಲ್ಲಿಕಾರ್ಜುನ್, ಜಿಲ್ಲಾ ಪ್ರಧಾನ ಯುವ ಕಾರ್ಯದರ್ಶಿ ಶಿವಕುಮಾರ ಗೌಡ , ಜಿಲ್ಲಾ ಪ್ರಧಾನ ಯುವ ಕಾರ್ಯದರ್ಶಿ ಉಮಾಪತಿ, ದೊಡ್ಡರಾಮಣ್ಣ, ಅಡಿಕಿ ಮಂಜುನಾಥ, ಪಟ್ಟಣ ಪಂಚಾಯತಿ ಸದಸ್ಯರಾದ ವಿನಯ್ ಕುಮಾರ್, ವಿದ್ಯಾಶ್ರೀ ಮೇಘರಾಜ್, ಜಗದೀಶ್, ಕೆ. ಶೈಲಜಾ ರಾಜೀವ್, ಸಾವಿತ್ರಮ್ಮ ಕಾಸಲಪ್ರಕಾಶ್. ಅಂಜಿನಮ್ಮ ವಿರುಪಾಕ್ಷಿ.ಮತ್ತು ಕಾಂಗ್ರೆಸ್ ಮುಖಂಡರಾದ ಸತೀಶ್, ಆರ್. ಎಂ.ಗುರುಬಸವರಾಜ, ಕನ್ನಳ್ಳಿ ಗುರುಬಸವರಾಜ, ಕೆಂಪಳ್ಳಿ ಗುರುಸಿದ್ದನಗೌಡ,ಆಚೇಮನಿ ಮಲ್ಲಿಕಾರ್ಜುನ, ಶಿರಿಬಿ ಕೊಟ್ರೇಶಿ, ಎಂ.ಶ್ರೀನಿವಾಸ ಮತ್ತು ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಇತರರು ಇದ್ದರು.