ಕೊಟ್ಟೂರು: ಮೇ ಹತ್ತರಂದು ನಡೆಯಲಿರುವ ಕರ್ನಾಟಕ ಸಾರ್ವತ್ರಿಕ ಚುನಾವಣೆಯು ನಡೆಯಲಿದ್ದು ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಬಲ್ಲಾಹುಣಿಸಿ ರಾಮಣ್ಣ ಪರವಾಗಿ ಕೊಟ್ಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ನೀಡುವಂತೆ ಮತಯಾಚನೆ ನಡೆಸಲಾಯಿತು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸೋಮವಾರದಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಬಲ್ಲಾಹುಣಿಸಿ ರಾಮಣ್ಣ ಪರವಾಗಿ ಕೊಟ್ಟೂರಿನ ಎಪಿಎಂಸಿ ಅಧ್ಯಕ್ಷರಾದ ಪೂಜಾರ್ ಉಮೇಶ್ ಹಾಗೂ ಎಪಿಎಂಸಿ ಹಮಾಲರ ಸಂಘದ ಅಧ್ಯಕ್ಷರಾದ ಗೊಲ್ಲರಹಳ್ಳಿ ಪರಸಪ್ಪ ಹಾಗೂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬುಗ್ಗಳ್ಳಿ ಕೊಟ್ರೇಶ್, ಬದ್ದಿ ಪ್ರಭಾಕರ್ ದಲಾಲಿ ಅಂಗಡಿಗಳಿಗೆ ಮತ್ತು ಖರೀದ್ದಾರರ ಮುಂದೆ ಹೋಗಿ ಬಿಜೆಪಿ ಪಕ್ಷಕ್ಕೆ ಮತವನ್ನು ನೀಡಬೇಕು ಎಂದು ಮತಯಾಚನೆ ನಡೆಸಿದರು. ಇನ್ನು ಅನೇಕ ಹಮಾಲರು ಬಿಜೆಪಿ ಪಕ್ಷದ ಪರವಾಗಿ ಮತಯಾಚನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನೆ ಸಂಚಾಲಕರಾದ ಬದ್ದಿ ಮರಿಸ್ವಾಮಿ, ತೆಗ್ಗಿನಕೇರಿ ಕೊಟ್ರೇಶ್, ಟಿ. ಹನುಮಂತಪ್ಪ ವಕೀಲರು, ಬಣಕಾರ್ ಹುಲುಗಪ್ಪ, ಟಿ. ಮೈಲಾಪ್ಪ, ಬದ್ದಿದುರ್ಗೇಶ್, ಪಿ ಚಂದ್ರಶೇಖರ್, ಬಿ. ಶಿವರಾಜ್, ಕೆ. ಭರಮಪ್ಪ,ಹಮಾರರಾದ ಎಚ್ ಕೊಲ್ಲಾರಿ, ಕನ್ನಕಟ್ಟಿ ಬಸವರಾಜ್, ಬಿ. ಅಂಜಿನಿ,ಕೆ. ರಾಜು, ಜಿ. ದುರುಗೇಶ, ಪಿ. ಅಜ್ಜಯ್ಯ, ಬಿ ಕೊಮಾರಪ್ಪ, ಇನ್ನೂ ಅನೇಕರು ಉಪಸ್ಥಿತರಿದ್ದರು.