ಸಿದ್ದಾಪುರ ಗ್ರಾಮದಲ್ಲಿ ವಾಂತಿ ಭೇದಿ ಹತೋಟಿಗೆ, ಟಿ.ಹೆಚ್.ಓ ಡಾ.ಭರತ್

0
337

ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಇಂದು ಕೇವಲ ಒಂದು ಪ್ರಕರಣ ಮಾತ್ರ ವರದಿಯಾಗಿದ್ದು, ಸಂಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ವಾಪಸ್ಸು ಗ್ರಾಮಕ್ಕೆ ಬಂದಿದ್ದಾರೆ,ಮತ್ತೆ

ಸಂಜೆವರೆಗೂ ಯಾವುದೇ ಪ್ರಕರಣ ವರದಿಯಾಗಿಲ್ಲ, ನಿಯಂತ್ರಣ ಕ್ರಮಗಳು ಮುಮದುರೆಸಲಾಗಿದೆ ಕ್ಲೋರಿನೇಟೆಡ್ ನೀರು ಟ್ಯಾಂಕರ್ ಮೂಲಕ ಬಿಡಲಾಗುತ್ತಿದೆ, ಪೈಪ್ ಲೈನ್ ದುರಸ್ತಿ ಕಾರ್ಯ ಮಾಡಲು ಸೂಚಿಸಲಾಗಿದೆ,ಆಶಾ ಮತ್ತು ಆರೊಗ್ಯ ಸಿಬ್ಬಂದಿಯವರಿಂದ ಮನೆ ಮನೇ ಸಮೀಕ್ಷೆ ಮುಂದುವರೆಸಲಾಗಿದೆ, ಶುಧ್ಧ ಕುಡಿಯುವ ನೀರಿನ ಕುರಿತು ಜಾಗೃತಿ ಜಾಥ ನಡೆಸಲಾಯಿತು,

ಜಾಥದಲ್ಲಿ ಡಾ.ಅಕ್ಷಯ್, ಸಂತೋಷ, ದೀಪಾ,ಅನಿತಾ, ನೀರು ಮತ್ತು ನೈರ್ಮಲ್ಯ ತಾಲೂಕು ವಿಭಾಗದ ಕೊಟ್ರೇಶ್, ಬಂಡೆಗೌಡ, ಆಶಾ ಕಾರ್ಯಕರ್ತೆ ಪರಿಮಳ,ರೇಣುಕಾ,ಗೀತಾ,ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮಿ, ಕೃಷ್ಣಾನಗರ ಎಮ್.ಎಮ್.ಯು ತಂಡದ ವೈದ್ಯರು ಮತ್ತು ಸಿಬ್ಬಂದಿಯವರು ಹಾಜರಿದ್ದರು.

LEAVE A REPLY

Please enter your comment!
Please enter your name here