ಮಳೆಗಾಲದಲ್ಲಿ ಮಕ್ಕಳೇ ಟಾರ್ಗೆಟ್​..! ಪೋಷಕರೇ ಎಚ್ಚರ; ಕಣ್ಣು ಕೆಂಪಾಗಿಸುತ್ತಿದೆ ಮದ್ರಾಸ್ ಐ

0
147

ಕೊಟ್ಟೂರು: ರಾಜ್ಯದ ವಿವಿಧ ಭಾಗಗಳಲ್ಲಿ ಮಕ್ಕಳಲ್ಲಿ ಮದ್ರಾಸ್‌ ಐ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಇದರ ಪರಿಣಾಮ ಪೋಷಕರು ಬಹಳ ಆತಂಕಕ್ಕೆ ಒಳಗಾಗಿದ್ದಾರೆ.

ಕಳೆದೊಂದು ತಿಂಗಳಿನಿಂದ ಎಡಬಿಡದೆ ಸುರಿಯುತ್ತಿರೋ ಮಳೆಗೆ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ. ಜೋರು ಮಳೆ ಮಧ್ಯೆ ರಾಜ್ಯದಲ್ಲಿ ಮದ್ರಾಸ್‌ ಐ ಸಮಸ್ಯೆಯೂ ಹೆಚ್ಚುತ್ತಿದೆ. ಇತ್ತೀಚೆಗೆ ಹಲವು ಮಕ್ಕಳಲ್ಲಿ ಮದ್ರಾಸ್‌ ಐ ಸಮಸ್ಯೆ ಕಾಣಿಸಿಕೊಂಡಿದ್ದು, ಪೋಷಕರು ಎಚ್ಚರ ವಹಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು, ರಾಜ್ಯಾದ್ಯಂತ ಮಳೆಯ ಅಬ್ಬರದ ಮಧ್ಯೆಯೂ ಎಲ್ಲಿ ಕೇಳಿದರೂ ಒಂದೇ ಸುದ್ದಿ. ಅದು ಮದ್ರಾಸ್‌ ಐ ಸಮಸ್ಯೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರೋ ಕಾರಣ ಈ ಮದ್ರಾಸ್​​ ಐ ಕಾಣಿಸಿಕೊಂಡಿದೆ. ಇದನ್ನು ಪಿಂಕ್​ ಐ ಎಂದು ಕರೆಯಲಾಗುತ್ತದೆ.

ಪ್ರತಿದಿನ 100 ರಿಂದ 150 ಸೊಂಕಿತರು ಕೊಟ್ಟೂರು ಪಟ್ಟಣದ ಸಮುದಾಯದ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಆಗಮಿಸುತ್ತಿದ್ದು. ಆಸ್ಪತ್ರೆಗೆ ಮದ್ರಾಸ್‌ ಐ ರೋಗಿಗಳಿಗೆ ಚಿಕಿತ್ಸೆಯ ಎಲ್ಲಾ ರೀತಿಯ ಔಷಧಿ ಲಭ್ಯವಾಗಿರುತ್ತದೆ. ಮಳೆಗಾಲದಲ್ಲಿ ಹೆಚ್ಚಿನ ತೇವಾಂಶ ಇರುವುದರಿಂದ ಮದ್ರಾಸ್ ಬರುವ ಸಾಧ್ಯತೆ ಹೆಚ್ಚು ಜಾಗೃತಿಯಾಗಿ ವಹಿಸಬೇಕೆಂದು ತಾಲೂಕು ವೈದ್ಯಾಧಿಕಾರಿಗಳು ಸಾರ್ವಜನಿಕರಿಗೆ ತಿಳಿಸಿದರು.

ಏನಿದು ಮದ್ರಾಸ್​ ಐ?

ಮಳೆಗಾಲದಲ್ಲಿ ಮದ್ರಾಸ್‌ ಐ ಕಾಣಿಸಿಕೊಳ್ಳುತ್ತದೆ. ಮಕ್ಕಳ ಕಣ್ಣುಗಳು ಗುಲಾಬಿ ಬಣ್ಣಕ್ಕೆ ತಿರುಗುವುದೇ ಮದ್ರಾಸ್​ ಐ.ಇದಕ್ಕೆ ಕಂಜಂಕ್ಟಿವಿಟಿಸ್‌ ಎಂದೂ ಕರೆಯುತ್ತೇವೆ. ಅದರಲ್ಲೂ ಮಳೆಗಾಲದಲ್ಲೇ ಹೆಚ್ಚು ಕಾಣಿಸಿಕೊಳ್ಳಲು ಕಾರಣ ಬ್ಯಾಕ್ಟೀರಿಯಾ. ಮದ್ರಾಸ್‌ ಐ ಸಮಸ್ಯೆ ಕಾಣಿಸಿಕೊಂಡಾಗ ಕಣ್ಣುಗಳು ಕೆಂಪಾಗುತ್ತವೆ. ಕಣ್ಣುಗಳು ಊದಿಕೊಳ್ಳುವುದು, ನೀರು ಸೋರುವುದು, ತುರಿಕೆ ಉಂಟಾಗುವುದು; ಹೀಗೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಇದು ಗಂಭೀರ ಕಾಯಿಲೆ ನಿರ್ಲಕ್ಷ ಮಾಡಿದರೆ ಕಣ್ಣು ಕಳೆದುಕೊಳ್ಳುವ ಅಪಾಯವಿರುತ್ತದೆ.

ಮದ್ರಾಸ್ ಐ ತಡೆಗಟ್ಟಲು ಏನು ಮಾಡಬೇಕು?

ಪಿಂಕ್ ಐ ಕಾಣಿಸಿಕೊಂಡವರು ಬಟ್ಟೆಗಳು, ಟವಲ್, ಕರವಸ್ತ್ರಗಳನ್ನು ಎಂದು ಹಂಚಿಕೊಳ್ಳಬೇಡಿ, ಮದ್ರಾಸ್ ಐ ಕಾಣಿಸಿಕೊಂಡಿರುವವರು ಕನ್ನಡಕ ಧರಿಸುವುದು ಒಳ್ಳೆಯದು, ಶಾಲೆಯಲ್ಲಿ ಮಕ್ಕಳಿಗೆ ಮದ್ರಾಸ್ ಐ ಹರಡುತ್ತಿದ್ದರೆ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ. ಮಕ್ಕಳನ್ನು ಶಾಲೆಗೆ ಕಳುಹಿಸಬಾರದು. ನಾಲ್ಕೈದು ದಿನಗಳ ನಂತರ ಸೋಂಕು ಹೊರಡುವುದಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡ ನಂತರ ಮಕ್ಕಳನ್ನು ಶಾಲೆಗೆ ಕಳಿಸಬೇಕು. ನೀವು ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡದ ಬಿಟ್ಟರೆ ಗಂಭೀರವಾದ ಕಣ್ಣಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಈ ರೀತಿಯ ಸೊಂಕುಗಳು ಕಂಡು ಬಂದರೆ ಕೂಡಲೇ ಹತ್ತಿರದ ಕೊಟ್ಟೂರು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷಿಸಬೇಕು ಎಂದು ತಾಲೂಕು ವೈದ್ಯಾಧಿಕಾರಿಗಳು ಪ್ರದೀಪ್ ಕುಮಾರ್ ಸಾರ್ವಜನಿಕರಲ್ಲಿ ವಿನಂತಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here