ಕ್ಷಯರೋಗ ನಿರ್ಮೂಲನೆ ಕುರಿತು ಗುಂಪು ಸಭೆಗಳ ಮೂಲಕ ಜಾಗೃತಿ ಕಾರ್ಯಕ್ರಮ,

0
51

ಸಂಡೂರು: ನ: 04: ತಾಲೂಕಿನ ತೋರಣಗಲ್ಲು ಗ್ರಾಮದ 2 ನೇ ಅಂಗನವಾಡಿ ಕೇಂದ್ರದಲ್ಲಿ ಕೆ.ಹೆಚ್.ಪಿ.ಟಿ ಸಂಸ್ಥೆಯ ಸಹಯೋಗದಲ್ಲಿ ಗುಂಪು ಸಭೆಗಳ ಮೂಲಕ ಕ್ಷಯರೋಗ ನಿರ್ಮೂಲನೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಕ್ಷಯರೋಗ ಹಳೆಯ ಕಾಯಿಲೆ ಆದರೂ ಇನ್ನೂ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ, ಎದೆ ನೋವು,ನಿರಂತರ ಕೆಮ್ಮು,ಸಂಜೆ ಜ್ವರ,ಬೆವರು,ಹಸಿವೆ ಇಲ್ಲದಿರುವುದು, ತೂಕ ಕಡಿಮೆಯಾಗುವುದು, ಕಫ ಬರುವುದು,ಕಫದಲ್ಲಿ ರಕ್ತದ ಕಣಗಳು ಇರುವುದು ಕಂಡುಬಂದರೆ ಇವು ಶ್ವಾಶಕೋಶ ಕ್ಷಯರೋಗದ ಲಕ್ಷಣಗಳಾಗಿವೆ, ಅಲ್ಲದೆ ಕುತ್ತಿಗೆ, ಕಂಕುಳಲ್ಲಿ, ಸಂದುಗಳಲ್ಲಿ ಗಡ್ಡೆಗಳೇನಾದರೂ ಇದ್ದರೆ ಅದು ಶ್ವಾಶಕೋಶೇತರ ಕ್ಷಯರೋಗವಾಗಿರುತ್ತದೆ, ಯಾವುದೇ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡಬೇಡಿ ಆದಷ್ಟು ಬೇಗ ಆರೋಗ್ಯ ಕೇಂದ್ರಕ್ಕೆ ಬಂದು ಕಫ ಪರೀಕ್ಷೆ ಹಾಗೂ ತಪಾಸಣೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು, ನಮ್ಮ ಪ್ರದೇಶಗಳಲ್ಲಿ ಹೊರ ರಾಜ್ಯಗಳಿಂದ ಬರುವವರ ಸಂಖ್ಯೆ ಅಧಿಕ,ಅವರು ಯಾವದೇ ರಾಜ್ಯದವರಾಗಿರಲಿ ಇಲ್ಲಿಯವರೇ ಆಗಿರಲಿ ನಮ್ಮ ದೇಶವನ್ನು ಕ್ಷಯ‌ ಮುಕ್ತ ಮಾಡಬೇಕಿದೆ, ಇತರೆ ರಾಜ್ಯಗಳಿಂದ ವಲಸೆ ಬಂದವರು ಸಹಾ ಇಲ್ಲೇ ತಪಾಸಣೆಗೆ ಒಳಗಾಗಲು ಸೂಚಿಸಿದರು,ದೃಢಪಟ್ಟರೆ ಆರು ತಿಂಗಳು ಉಚಿತ ಚಿಕಿತ್ಸೆ ಜೊತೆಗೆ 500/- ರೂಪಾಯಿ ಸಹಾಯ ಧನ ನೀಡಲಾಗುತ್ತದೆ, ನಿಕ್ಷಯ್ ಮಿತ್ರ ಯೋಜನೆಯಡಿ ದಾನಿಗಳಿಂದ ಪಡೆದು ಪೌಷ್ಟಿಕ ಆಹಾರದ ಕಿಟ್‌ಗಳನ್ನು ಸಹಾ ಆರು ತಿಂಗಳ ಕಾಲ ಒದಗಿಸಲಾಗುತ್ತದೆ, ಹಾಗೆನಾದರೂ ಕ್ಷಯರೋಗದ ಲಕ್ಷಣಗಳು ಇರುವರು ನಿಮ್ಮ ಕಣ್ಣಿಗೆ ಬಿದ್ದರೆ ನಮ್ಮ ಸ್ವಯಂ ಸೇವಕರಿಗೆ ತಿಳಿಸಿ,ಎಲ್ಲರೂ ಕೈಜೋಡಿಸಿದಾಗ ಕ್ಷಯರೋಗ ಮುಕ್ತ ಭಾರತ ಮಾಡಲು ಸಾಧ್ಯವಿದೆ ಎಂದು ಅವರು ತಿಳಿಸಿದರು,

ಈ ಸಂದರ್ಭ ಕೆ.ಹೆಚ್.ಪಿ.ಟಿ ಸ್ವಯಂ ಸೇವಕಿ ಉಮಾದೇವಿ, ಅಂಗನವಾಡಿ ಕಾರ್ಯಕರ್ತೆ ಶಂಕ್ರಮ್ಮ,ಮಂಜುಳಾ ಸಾರ್ವಜನಿಕರಾದ ಯೋಗಮ್ಮ,ನಾಗರತ್ನ,ಕರೆಮ್ಮ,ತಿಪ್ಪಮ್ಮ,ಪಾರ್ವತಮ್ಮ,ದ್ರಾಕ್ಷಾಯಣಿ,ಶಂಕ್ರಮ್ಮ,ಸ್ವಪ್ನ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here