ಹದಿನೈದು ತೊಲೆ ಬೆಳ್ಳಿ ಬಂಗಾರ ಸೇರಿ 4,80,000 ನಗದು ಹಣ ಕಳವು,

0
150

ಕುರುಗೋಡು ಸಮೀಪದ ಮಣ್ಣೂರು- ಸೂಗೂರು ಗ್ರಾಮದ ಮಟ್ಟಿ ಮಟ್ಡಿ ವ್ಯಾಪ್ತಿಯಲ್ಲಿನ ಸ್ಥಳೀಯ ಚಾಗಿ ವೀರೇಶ ಗೌಡ ಇವರ ಮನೆ ತಡರಾತ್ರಿ ವೇಳೆಯಲ್ಲಿ ಕಳ್ಳತನ ನಡೆದಿದ್ದು ಈ ಕುರಿತಂತೆ ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲುಗೊಂಡಿದೆ

ಶನಿವಾರ ಬೆಳಗಿನ ಜಾವ ಒಂದು ಗಂಟೆಯಿಂದ ನಾಲ್ಕು ಗಂಟೆಯ ಮಧ್ಯೆ ಘಟನೆ ಜರುಗಿದ್ದು ಬೀಗ ಹಾಕಿದ ಮನೆಯ ಚಿಲಕವನ್ನು ಮುರಿದು ಗೋದ್ರೆಜ್ ತೆಗೆದು ಅದರಲ್ಲಿನ ಬಂಗಾರದ ಆಭರಣಗಳು ಬೆಳ್ಳಿಯ ಆಭರಣಗಳು ಮತ್ತು ನಗದು ಹಣವನ್ನು ದೋಚಿದ್ದಾರೆ

ಬಂಗಾರದ ಆಭರಣಗಳಾದ ಕತ್ತಿನ ಸರ ನೆಕ್ಲೆಸ್ ಉಂಗುರಗಳು ಎಳೆ ಸರಗಳು ಕೈ ಚೈನಿಗಳು ಕಿವಿಯ ಆಭರಣಗಳು ಸರಗಳು ಸೇರಿದಂತೆ ಕಾಲು ಚೈನೆಗಳು ಹಾಗೂ ಇನ್ನಿತರ ಒಟ್ಟು 19 ತೊಲೆ ಬಂಗಾರ ಮತ್ತು ಹದಿನೈದು ತೊಲೆ ಬೆಳ್ಳಿ ಹಾಗೂ 4,80,000 ನಗದು ಹಣವನ್ನು ಕಳ್ಳರು ದೋಚಿದ್ದಾರೆ

ಸುದ್ದಿ ತಿಳಿಯುತ್ತಲೇ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಿ, ಮಾಹಿತಿ ಸಂಗ್ರಹಿಸಿದ್ದಾರೆ

ಈ ಸಂಬಂಧವಾಗಿ ಸಿರಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ

LEAVE A REPLY

Please enter your comment!
Please enter your name here