ಕೊಟ್ಟೂರು : ಐತಿಹಾಸಿಕ ವಿಜಯನಗರ
ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರ ಕೊಟ್ಟೂರಿನಲ್ಲಿ ಪವಾಡ ಪುರುಷ ಶ್ರೀಗುರು ಕೊಟ್ಟೂರೇಶ್ವರ ರಥೋತ್ಸವ ಮಾರ್ಚ್ 04 ರಂದು ನಡೆಯಲಿದೆ.
ಬುಧವಾರ ರಂದು ಸಂಜೆ ಕೊಟ್ಟೂರಿನ ಭಕ್ತರ ಸಮ್ಮುಖದಲ್ಲಿ ಆರಾಧ್ಯದೈವ ಶ್ರೀ ಗುರುಕೊಟ್ಟೂರೇಶ್ವರ ರಥದ ಗಡ್ಡೆಯನ್ನು ಹೊರಹಾಕಲಾಯಿತು.
ನೆರೆದಿದ್ದ ಭಕ್ತರು “ಶ್ರೀ ಗುರು ಕೊಟ್ಟೂರು ದೊರೆಯೇ ನಿನಗಾರು ಸರಿಯೇ…ಸರಿ ಸರಿ ಎಂದವರ ಹಲ್ಲು ಮುರಿಯೇ ಬಹುಪರಾಕ್…’ಎಂಬ ಜಯಘೋಷ ಮೊಳಗಿಸುತ್ತ ರಥದ ಗಡ್ಡೇಯ ಹೊರಹಾಕಲಾಯಿತು.
ರಾತ್ರಿ ರಥದ ಹತ್ತಿರ ಗುಗ್ಗರಿ ಪೂಜೆ ನಡೆಯುತ್ತದೆ.
ವರದಿ: ಶಿವರಾಜ್ ಕನ್ನಡಿಗ