ಧಾರವಾಡ: ಡಿ.31: ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ ಧಾರವಾಡ ವತಿಯಿಂದ ಡಾ. ಮಲ್ಲಿಕಾರ್ಜುನ ಮನಸೂರ ಅವರ 111 ನೇ ಜನ್ಮ ದಿನದ ಅಂಗವಾಗಿ ಇಂದು ಬೆಳಿಗ್ಗೆ ಆಯೋಜಿಸಲಾದ ಸಂಗೀತ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಡಾ.ಮಲ್ಲಿಕಾರ್ಜುನ ಮನಸೂರ ಅವರ ಸಮಾಧಿಗೆ ಪೂಜೆ ಸಲ್ಲಿಸಲಾಯಿತು.
ಮನಸೂರ ಅವರ ಪುತ್ರಿಯಾದ ಶ್ರೀಮತಿ ಗೀತಾ ಎಂ. ಕೊಡ್ಲಿ, ಅಕ್ಕಮಹಾದೇವಿ ಚಂದ್ರಕಾಂತ ಆಲೂರು, ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಶಾಂತರಾಮ ಹೆಗಡೆ, ಟ್ರಸ್ಟಿನ ಸದಸ್ಯರಾದ ದಿಲೀಪ ದೇಶಪಾಂಡೆ, ಶಂಕರ ಕುಂಬಿ, ಕನ್ನಡ ಮ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಮಂಜುಳಾ ಎಲಿಗಾರ ಹಾಗೂ ಅನೇಕ ಸಂಗೀತಗಾರರು, ಇತರರು ಪುಷ್ಪ ಸಮರ್ಪಿಸಿ ಗೌರವ ಸಲ್ಲಿಸಿದರು.