ಹೊಸಪೇಟೆ(ವಿಜಯನಗರ),ಏ.08 : ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ನಿಮಿತ್ತ ಕಲ್ಲಳ್ಳಿ ಗ್ರಾಮಕ್ಕೆ ತಹಶೀಲ್ದಾರರಾದ ವಿಶ್ವಜೀತ ಮೇಹತಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಜನರ ಅಹವಾಲು ಆಲಿಸಲಿರುವ ಹಿನ್ನಲೆ ಹೊಸಪೇಟೆ ತಾಲ್ಲೂಕು ಕಚೇರಿಯ ಸಭಾಂಗಣದಲ್ಲ್ಲಿ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಶುಕ್ರವಾರದಂದು ಸಭೆಯನ್ನು ಹಮ್ಮಿಕೊಳ್ಳಲಾಯಿತ್ತು.
ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಕಲ್ಲಳ್ಳಿ ವ್ಯಾಪ್ತಿಯ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ತಹಶೀಲ್ದಾರರಾದ ವಿಶ್ವಜೀತ ಮೇಹತಾ ಅವರು ಮಾತನಾಡಿದರು.
ಕಲ್ಲಳ್ಳಿ ಗ್ರಾಮದ ಮುಖ್ಯ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು ಮತ್ತು ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು.
ಕಲ್ಲಳ್ಳಿ ಗ್ರಾಮದ ಕುಡಿಯುವ ನೀರು, ವಸತಿ, ನಿವೇಶನ, ಶಾಲೆ, ಕೋವಿಡ್-19ನ ಲಸಿಕೆ ಬೂಸ್ಟರ್ ವ್ಯವಸ್ಥೆ, ಕೃಷಿ ಬಗ್ಗೆ, ಪಿಂಚಣಿ ವೇತನಗಳ ಹಾಗೂ ನರೇಗಾ ಯೋಜನೆ ಸೌಲಭ್ಯದ ಮಾಹಿತಿ ಪಡೆದು ಮತ್ತು ಜನರ ಸಮಸ್ಯೆಗಳ ಮನವಿಯನ್ನು ಪಡೆದುಕೊಂಡು ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಆಹಾರ ಇಲಾಖೆಯ ಶಿರಸ್ತೇದಾರ್ ನಾಗರಾಜ, ತಾಲ್ಲೂಕು ಕಚೇರಿಯ ಶಿರಸ್ತೇದಾರ ಶ್ರೀಧರ್ ಹಾಗೂ ಕಲ್ಲಳ್ಳಿ ಗ್ರಾಮದ ಆಡಳಿತ ವರ್ಗದ ಅಧಿಕಾರಿಗಳು ಇದ್ದರು.