ಬೆಂಗಳೂರು ದಿ: ಆಗಸ್ಟ್ 12 ರಂದು ಹೈ ಕೋರ್ಟ್ ನಲ್ಲಿ “ ಆಂಬುಲೆನ್ಸ್ಗೆ ದಾರಿ ಬಿಡಿ, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ” ಜಾಗೃತಿ ಮ್ಯಾರಥಾನ್ ಓಟದ ಭಿತ್ತಿಪತ್ರವನ್ನ ಕರ್ನಾಟಕ ಉಚ್ಚ ನ್ಯಾಯಾಲಯದ ಹೆಚ್ಚುವರಿ ಅಡ್ವೋಕೇಟ್ ಜನರಲ್ ರಾದ ಎಂ. ಅರುಣ್ ಶ್ಯಾಮ್, ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರಸನ್ನ ದೇಶಪಾಂಡೆ, ಹೆಚ್ಚುವರಿ ಅಡ್ವೋಕೇಟ್ ಜನರಲ್ ಸುಬ್ರಮಣ್ಯರವರು ಬಿಡುಗಡೆಗೊಳಿಸಿದರು, 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ್ ಮಹೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪರವರು ಇದೇ ತಿಂಗಳು 15 ರಂದು ಸ್ವಾತಂತ್ರ್ಯ ದಿನದಂದು ಬೆಂಗಳೂರು ಮಹಾನಗರದಲ್ಲಿ “ಆಂಬುಲೆನ್ಸ್ಗೆ ದಾರಿ ಬಿಡಿ, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ” ಕುರಿತು ಜಾಗೃತಿಗಾಗಿ ರಾಷ್ಟ್ರಧ್ವಜ ಹಿಡಿದು 21 ಕಿಲೋ ಮೀಟರ್ ಓಟವನ್ನು ಹಮ್ಮಿಕೊಂಡಿದ್ದರ ಜಾಗೃತಿ ಓಟದ ಭಿತ್ತಿಪತ್ರ ಮತ್ತು ಚಿನ್ನೆಯನ್ನು ಬಿಡುಗಡೆಗೊಳಿಸಿದರು