ಕರೋನಾ ಲಸಿಕೆ ಹಾಕಿಸಿಕೊಂಡು ಜನಜಾಗೃತಿ ಮೂಡಿಸಿದ ಶಾಸಕ ತುಕಾರಾಂ

0
184

ಕೊರಾನ ಲಸಿಕೆಯನ್ನು ಹಾಕಿಸಿಕೊಳ್ಳುವುದರ ಮೂಲಕ ಕರೋನಾ ಸೋಂಕಿನ ವಿರುದ್ಧ ಜಯ ಸಾಧಿಸಬೇಕಿದೆ ಎಂದು ಶಾಸಕ ಈ ತುಕಾರಾಂ ಅಭಿಪ್ರಾಯಪಟ್ಟರು.

ಅವರು ಸಂಡೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೋನಾ ಲಸಿಕೆಯನ್ನು ಹಾಕಿಸಿಕೊಳ್ಳುವುದರ ಮೂಲಕ ಜಾಗೃತಿ ಮೂಡಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, 100 ಹಾಸಿಗೆಯ ಸರ್ಕಾರಿ ಆಸ್ಪತ್ರೆಯನ್ನು 250 ಬೆಡ್ ಗಳ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಮೇಲ್ದರ್ಜೆಗೇರಿಸಲಾಗುವುದು ಜೊತೆಗೆ ಉನ್ನತ ದರ್ಜೆಯ ತಾಯಿ-ಮಗುವಿನ ಆಸ್ಪತ್ರೆಯನ್ನು ಕೂಡ ನಿರ್ಮಿಸಲು ಯೋಜನೆ ರೂಪಿಸಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾ. ರಾಮ್ ಶೆಟ್ಟಿ ,ಡಾ.ಕಿರಣ್, ಆರೋಗ್ಯ ಸಿಬ್ಬಂದಿ ಶಾಸಕ ಅಂಗ ರಕ್ಷಕ ಮದರ್ ಅಲಿ ಇತರರಿದ್ದರು

LEAVE A REPLY

Please enter your comment!
Please enter your name here