ಹಾಳು ಬಿದ್ದ ಪಶು ಪಕ್ಷಿಗಳು ನೀರಿನ ಅರವಟ್ಟಿಗೆ ಸ್ವಚ್ಚಗೊಳಿಸಿ, ಪಶುಪಕ್ಷಿಗಳ ನೀರಿಣಿಸಿದ ಮಲ್ಲಾಪುರ ಗ್ರಾಮಸ್ಥರು

0
209

ಸಿಂಧನೂರು ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಬೇಸಿಗೆಯಲ್ಲಿ ಪಾಳು ಬಿದ್ದಿದ್ದ ನೀರಿನ ತೊಟ್ಟಿ ಸ್ವಚ್ಚಗೊಳಿಸಿ, ದನಕರುಗಳಿಗೆ ಸಹನಾ ಹಸಿರು ಸಿಂಧನೂರು ಅವರಿಂದ ಪಶುಪಕ್ಷಿಗಳ ನೀರಿನ ತೊಟ್ಟಿಗೆ ನೀರಿನ ಟ್ಯಾಂಕಿ ಮುಖಾಂತರ ನೀರು ತುಂಬಿಸುವ ಕಾರ್ಯವನ್ನು ಗ್ರಾಮಸ್ಥರು ಮಾಡಿದರು.

ಮಲ್ಲಾಪುರ ಗ್ರಾಮದ ಯುವಕರ ಪಡೆ ಕಳೆದ 8 ದಿನಗಳಿಂದ ನಿರಂತರವಾಗಿ ಮಲ್ಲಾಪುರ ಗ್ರಾಮ ಸ್ವಚ್ಛತೆ, ಗಿಡ ಮರಗಳ ಸಂರಕ್ಷಣೆ, ಪಶುಪಕ್ಷಿಗಳ ಅರವಟ್ಟಿಗೆ, ಮೂಕ ಪಕ್ಷಿಗಳಿಗೆ ಮಣ್ಣಿನ ಮಡಿಕೆ, ಶಾಲೆ ಸ್ವಚ್ಛತೆ, ಮಲ್ಲಾಪುರ ಮಾದರಿ ಗ್ರಾಮ ಮಾಡುವುದು ಕಡೆಗೆ ತಂಡ ಮಾಡಿಕೊಂಡು ಮಾದರಿ ಫೌಂಡೇಶನ್ ಅಂತ ನಾಮಕರಣ ಮಾಡಿ ಹಲವಾರು ಗ್ರಾಮದ ಕೆಲಸಕಾರ್ಯಗಳಲ್ಲಿ ತೊಡಗಿದೆ.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಅಮರೇಗೌಡ ಮಲ್ಲಾಪುರ, ಪರಶುರಾಮ ಮಲ್ಲಾಪೂರ ಪ್ರಾಂಶುಪಾಲರು, ಬಸವರಾಜ್ ನಿಟ್ಟೂರ್, ಮುದುಕಪ್ಪ ಚಾವಣಿ,ದೇವರೆಡ್ಡಿ ಕೆಸರಟ್ಟಿ,ವೀರೇಶ್ ಹಾಲುಮತ, ದುಗ್ಗಪ್ಪ ,ಮಂಜುನಾಥ್ LIC, ವೆಂಕೋಬ ಜೂಲದ ಇದ್ದರು

LEAVE A REPLY

Please enter your comment!
Please enter your name here