ಸಿಂಧನೂರು ನಗರದಲ್ಲಿನ ಮುಖ್ಯರಸ್ತೆಯಲ್ಲಿರುವ ವ್ಯಾಪಾರಸ್ಥರಿಗೆ ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್ ವತಿಯಿಂದ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ಅಂಗವಾಗಿ ಮಾಸ್ಕ್ ಗಳನ್ನು ವಿತರಿಸಿ ಮಾತನಾಡಿದ ಸಂಸ್ಥಾಪಕ ಅಧ್ಯಕ್ಷ ಸಂತೋಷ್ ಅಂಗಡಿ ಅವರು ಪತ್ರಿಕಾ ಸ್ವಾತಂತ್ರ್ಯದ ಮೂಲಭೂತ ಸಿದ್ದಾಂತಗಳ ರಕ್ಷಣೆ ಮಾಡುತ್ತಿರುವ , ಕೆಲಸ ನಿರ್ವಹಣೆಯಲ್ಲಿ ಪ್ರಾಣಾ ಕಳೆದುಕೊಂಡು ಹಾಗೂ ಕೊರೊನ ಸಂಕಷ್ಟದ ಈ ಸಂದರ್ಭದಲ್ಲಿ ನಿಖರ ಸುದ್ಧಿ ನೀಡುತ್ತಿರುವ ಪತ್ರಕರ್ತರಿಗೆ ಈ ಕಾರ್ಯದ ಮೂಲಕ ಗೌರವ ಸಲ್ಲಿಸಿದರು.
ನಂತರ ಮಾಜಿ ನಗರಸಭೆ ಸದಸ್ಯ ಕೆ.ಬಸವರಾಜ ಗಡದ್ ಮಾತನಾಡಿ, ಕೋರೋನಾ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಜನರು ಕಡ್ಡಾಯ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಟ್ರಸ್ಟ್ ಸದಸ್ಯರು ಸೇರಿದಂತೆ ಹಲವು ವ್ಯಾಪಾರಸ್ಥರಿದ್ದರು.
ವರದಿ:ಅವಿನಾಶ ದೇಶಪಾಂಡೆ