ಕೊಟ್ಟೂರು ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿಯ ನೂತನ ಅಧ್ಯಕ್ಷರು/ ಉಪಾಧ್ಯಕ್ಷರ ಆಯ್ಕೆ!

0
630

ಕೊಟ್ಟೂರು: ರೈತರು ಬೆಳೆದ ಬೆಳೆಗೆ ನಾಯುತವಾದ ಬೆಲೆ ದೊರಕಿಸುವುದು ನನ್ನ ಮುಖ್ಯ ಗುರಿ ಮತ್ತು ಪೂಜಾರ್ ಉಮೇಶ್ ಎಪಿಎಂಸಿ ನೂತನ ಅಧ್ಯಕ್ಷರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸೆಪ್ಟೆಂಬರ್ 29ರಂದು ಗುರುವಾರ ಬೆಳಗ್ಗೆ 12:30ಕ್ಕೆ ಎಪಿಎಂಸಿ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು ಅಧ್ಯಕ್ಷರಾಗಿ ಗೊಲ್ಲರಹಳ್ಳಿ ಪೂಜಾರ್ ಉಮೇಶ್ ಆಯ್ಕೆಯಾದರೂ ಮತ್ತು ಉಪಾಧ್ಯಕ್ಷರಾಗಿ ಮಂಗಾಪುರದ ಜಿ ಸಿದ್ದೇಶ್ ಆಯ್ಕೆ ಮಾಡಲಾಯಿತು. ಇನ್ನೂ ಉಳಿದ 13 ಸದಸ್ಯರನ್ನು ನಾಮನಿರ್ದೇಶನವನ್ನು ಮಾಡಲಾಯಿತು.

ನಂತರ ಲೋಕಸಭಾ ಸದಸ್ಯರಾದ ವೈ.ದೇವೇಂದ್ರಪ್ಪನವರು ಮಾತನಾಡಿದರು ಮುಂಬರುವ ಚುನಾವಣೆ ಒಳಗಾಗಿ ನನ್ನ ಕ್ಷೇತ್ರದಲ್ಲಿ ಬರುವ ಕೆರೆಗಳು ಮತ್ತು ಅದರಲ್ಲಿ ಕೊಟ್ಟೂರು ಕ್ಷೇತ್ರದ ಉಳಿದ ಕೆರೆಗಳನ್ನು ಶೀಘ್ರದಲ್ಲೇ ನೀರು ತುಂಬಿಸುವ ಯೋಜನೆಯನ್ನು ಕೈಗೊಳ್ಳಲಾಗುವುದು ಎಪಿಎಂಸಿ ಒಂದು ಮಾದರಿ ಮಾರುಕಟ್ಟೆನಾಗಿ ಮಾಡುವೇ ಎಂದು ಹೇಳಿದರು.

ಈ ಸಂದರ್ಭದಲ್ಲಿ ಲೋಕಸಭೆಯ ಸದಸ್ಯರಾದ ವೈ ದೇವೇಂದ್ರಪ್ಪ, ತನ್ನ ಕೊಟ್ಟೂರು ಎಪಿಎಂಸಿ ಅಧ್ಯಕ್ಷರಾದ ಪೂಜಾರ್ ಉಮೇಶ್, ನೂತನ ಉಪಾಧ್ಯಕ್ಷರಾದ ಜಿ. ಸಿದ್ದೇಶ್, ಎಪಿಎಂಸಿ ಸರ್ವ ಸದಸ್ಯರು,ವಿಜಯನಗರ ಜಿಲ್ಲೆಯಾ ಬಿಜೆಪಿ ಜಿಲ್ಲಾಧ್ಯಕ್ಷರಾದ ಪಿ.ಚನ್ನಬಸವನಗೌಡರು, ಕೊಟ್ಟೂರು ತಾ. ಬಿಜೆಪಿ ಘಟಕದ ಅಧ್ಯಕ್ಷರಾದ ಆರ್. ವಿಕ್ರಂ ಕುಮಾರ್, ಬಿಜೆಪಿ ಮುಖಂಡರಾದ ತಿಂದಪ್ಪ, ಪ,ಪಂ. ಸದಸ್ಯರು ವೀಣಾ ವಿವೇಕಾನಂದ, ರಮೇಶ ,ಮತ್ತು ಎಪಿಎಂಸಿ ಕಾರ್ಯದರ್ಶಿಗಳಾದ ವೀರಣ್ಣ, ಎಪಿಎಂಸಿಯ ನೂತನ ಸರ್ವ ಸದಸ್ಯರು ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಿಬ್ಬಂದಿ ಉಪಸ್ಥಿತರಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here