ವನಸಿರಿ ಫೌಂಡೇಶನ್ ಜಿಲ್ಲಾ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಗೆ ಪರಿಸರ ರಕ್ಷಕ ಪ್ರಶಸ್ತಿ

0
162

ರಾಯಚೂರು ನಗರದಲ್ಲಿ ಡಾ:ಎ.ಪಿ.ಜೆ. ಅಬ್ದುಲ್ ಕಾಲಂ ಸಮಾಜ ಸೇವಾ ಸಂಸ್ಥೆ (ರಿ) ಯಾಪಲದಿನ್ನಿ ತಾ||ಜಿ||ರಾಯಚೂರು ಇವರ ದಶಮಾನೋತ್ಸವ ಹಾಗೂ 5 ನೇ ವರ್ಷದ
ಡಾ:ಎ.ಪಿ.ಜೆ.ಅಬ್ದುಲ್ ಕಾಲಂ ಪ್ರಶಸ್ತಿ ಸಮಾರಂಭದಲ್ಲಿ ವನಸಿರಿ ಫೌಂಡೇಶನ್ ತಂಡ ಪರಿಸರ ಕ್ಷೇತ್ರದಲ್ಲಿ ಮಾಡಿರುವ ಸೇವಾ ಕಾರ್ಯಗಳನ್ನು ಗುರುತಿಸಿ ವನಸಿರಿ ತಂಡಕ್ಕೆ ಪರಿಸರ ರಕ್ಷಕ ಪ್ರಶಸ್ತಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವನಸಿರಿ ಫೌಂಡೇಶನ್ ಜಿಲ್ಲಾ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಅವರು, ಈ ಪ್ರಶಸ್ತಿಯಿಂದ ನಮ್ಮ ವನಸಿರಿ ಕುಟುಂಬಕ್ಕೆ ಜವಾಬ್ದಾರಿ ಜಾಸ್ತಿ ಆಗಿದೆ ಇನ್ನೂ ಬಿಸಿಲು ನಾಡು ರಾಯಚೂರನ್ನು ಹಸಿರು ಮಾಡುವದೇ ನಮ್ಮ ಗುರಿಯಾಗಿದ್ದು. ಇನ್ನೂ ಹೆಚ್ಚು ಹೆಚ್ಚು ಗಿಡಗಳ ಮರಗಳನ್ನು ಬೆಳಸುವ ಕಾರ್ಯಕ್ಕೆ ನಮ್ಮ ತಂಡ ಸಿದ್ದವಾಗಿದೆ ಮತ್ತು ಪರಿಸರ ಅಷ್ಟೇ ಅಲ್ಲಾ ಗಿಡ ಮರಗಳಲ್ಲಿ ವಾಸವಾಗುವ ಪ್ರಾಣಿ ಪಕ್ಷಿಗಳ ನಿರುಣಿಸುವ ಕಾರ್ಯ ಕೂಡ ಮಾಡುತ್ತ ಬಂದಿದ್ದು ಇನ್ನೂ ಕೂಡ ನಿರಂತರವಾಗಿ ಸೇವಾಕಾರ್ಯ ಮಾಡುತ್ತೇವೆ ಎಂದರು.

LEAVE A REPLY

Please enter your comment!
Please enter your name here